Saturday, 24 September 2011

ನಂದು ಒಂದು ಮನ್ಸು

ನಂದು  ಒಂದು  ಮನ್ಸು 





ನಂಗೆ  ಒಂದು ವಿಷ್ಯ ಅರ್ಥ ಆಗೋದಿಲ್ಲ, ಅದು ಅಂದ್ರೆ , ನಂಗೆ ಬುದ್ದಿ ಬಂದಾಗಿಂದ , ನಾನು ಒಂದು ನಿಮಷ ಕೂಡ ನನ್ನ ಯೋಚನೆಗಳನ್ನ , ನನ್ನ ತಲೆಯನ್ನ ಖಾಲಿ ಇಟ್ಟಿದ್ದು ನಂಗೆ ಜ್ನಾಪ್ಕಾನೆ  ಬರ್ತಾ ಇಲ್ಲ , ಅದ್ರ ಅರ್ಥ ಅಂದ್ರೆ, ನನ್ನ ತಲೆ ಅಥವಾ ತಲೆ ಒಳಗೆ ಇರುವಂಥ ನನ್ನ ಮೆದಳು ( ಅಂಥಾದ್ದೊಂದು ಅಕಸ್ಮಾತ್ ನನ್ನ ತಲೆಯೊಳಗೆ ಇದ್ರೆ )  ನಿರಂತರವಾಗಿ ೨೦,೦೭೫ ದಿನಗಳ ಕಾಲ , ಅಥವಾ  ೪,೮೧,೮೦೦ ಘಂಟೆಗಳ ಕಲ, ಅಥವಾ ೨,೮೯,೦೮,೦೦೦ ನಿಮಿಷಗಳ ಕಾಲ , ಅಥವಾ ೧,೭೩,೪೪,೮೦,೦೦೦ ಸೆಕೆಂಡುಗಳ ಕಾಲ , ಕೆಲ್ಸಾ ಮಾಡ್ತಾನೆ ಇದೆ.  ಅಕಸ್ಮಾತ್ ಅದ್ರಲ್ಲಿ ನಿದ್ದೆ ಮಾಡಿದ ಸಮಯ , ಅಂದ್ರೆ ಸುಮಾರು ೪೩,೩೬,೨೦,೦೦೦ ಸೆಕೆಂಡ್ಗಳನ್ನು ಕಳೆದರು ಕೂಡ ಬಾಕಿ ಉಳ್ದಂತ ೧,೩೦,೦೮,೬೦,೦೦೦ ಸೆಕೆಂಡ್ಗಳ ಕಾಲ ನನ್ನ ಮೆದಳು ನಿರಂತರವಾಗಿ ಕೆಲ್ಸಾ ಮಾಡ್ತಾನೆ ಇದೆ. 








ನಂಗೆ ಈಗಲೂ ಅರ್ಥ ಅಗ್ತಾ ಇಲ್ಲ , ಇದು ಹೇಗೆ ಸಾಧ್ಯಾ ಅಂತಾ.  ಮತ್ತೆ ಭಾಳ ಸ್ವಾರಸ್ಯದ ಸಂಗತಿ ಅಂದ್ರೆ, ಇದು non stop , ಇದಕ್ಕೆ ಯಾವದೇ ರೀತಿಯ ಅಡಚಣೆಗಳಿಲ್ಲ , ಯಾವುದೇ ರೀತಿಯ ಬೇಸರವಿಲ್ಲ. ಇದು ಯಾವಾಗಲು ಯೋಚನೆ ಮಾಡ್ತಾನೆ ಇರುತ್ತೆ. ರಾತ್ರಿ ನಿದ್ದೆ ಮಾಡದಾಗ್ಲು ಕೂಡ ಇದಕೆ ರೆಸ್ಟ್ ಇಲ್ಲ, ಯಾಕೆ ಅಂದ್ರೆ ಆಗಲು ಕೂಡ ಇದು ಕನಸಿನ ರೂಪದಲ್ಲಿ ಯೋಚನೆ ಮಾಡ್ತಾನೆ ಇರ್ಬೇಕು. 






 ಅಯ್ಯೋ ಪಾಪ, ದೇವ್ರು ಸೃಷ್ಟಿ ಮಾಡೋವಾಗ, ಇದರ ಬಗ್ಗೆ ಯೋಚನೇನೆ ಮಾಡಲಿಲ್ಲ ಅಂತ ಕಾಣುತ್ತೆ. ಹಾಗಾಗಿ ಇದ್ಕೆ rest ಅನ್ನೋದೇ ಇಲ್ಲ. ಇದ್ಕೆ ರೆಸ್ಟ್ ಅಂದ್ರೆ ಬಹುಷಃ ಮನುಷ್ಯ ನಾಕು ಜನರ ಹೆಗಲು ಹತ್ತಿದ್ಮೆಲೇನೆ ಅಂತ ಕಾಣುತ್ತೆ. 




ನಾನು ಎಷ್ಟೋ ಸಲ ಅಂದ್ಕೊಳೋದಿದೆ , ಎಲ್ಲ ಯೋಚನೆ ಬಿಟ್ಟು, ನಿಶಿಂತನಾಗಿ ಇರ್ಬೇಕು ಅಂತ, ಆದ್ರೆ, ನಿಜ ಹೇಳ್ಬೇಕು ಅಂದ್ರೆ, ನಿಶ್ಚಿಂತನಾಗಿ ಇರಲಿಕ್ಕೆ ಸಾಧ್ಯಾನೆ ಇಲ್ಲ. ಯಾಕೆ ಅಂದ್ರೆ, ಮನಸ್ಸು ಯಾವಾಗಲು ಏನಾದ್ರು ಯೋಚನೆ ಮಾಡ್ತಾನೆ ಇರುತ್ತೆ. ಅದು ಖಾಲಿ ಇರೋದೇ ಇಲ್ಲ. 

ಮನಸ್ಸು ಅಂದ್ರೆ ಏನು, ಯಾರಾದ್ರು ನಂಗೆ ಹೇಳ್ತಿರ, ಪ್ಲೀಸ್ . ಮನಸ್ಸು ಅಂದ್ರೆ ಅದು ಎಲ್ಲಿರುತ್ತೆ ? ತಲೆಯೋಳ್ಗ, ಹ್ರದಯದೊಲ್ಗ, ಇಲ್ಲ, ಹೊಟ್ಟೆಯೋಳ್ಗಾ, ಎಲ್ಲಿರುತ್ತೆ. ಮನಸ್ಸಿನ ಪರಿಕಲ್ಪನೆ ಏನು ?  ಮನಸ್ಸು ಎಂಬ ಶಬ್ದ ಎಲ್ಲಿಂದ ಬಂತು ? ಮನಸ್ಸಿಗೂ ಕೂಡ ತಲೆ ಅಂತ ಇದ್ಯಾ? ತಲೆ ಇದ್ರೆ ಅದರೊಳಗೆ ಮೆದಳು ಇದ್ಯಾ?  ಈ ರೀತಿ ನಾನಾ ರೀತಿಯ ಪ್ರಶ್ನೆಗಳು ನನ್ನ ಮನಸ್ಸಿನೊಳಗೆ ಬರ್ತಾನೆ ಇರುತ್ತೆ.  ಈ ಮನಸ್ಸಿಗೆ  ವಿರಾಮ, ಆರಾಮ , ನಿದ್ದೆ, , ಊಟ , ಏನು ಬೇಡ್ವಾ ?  ಇದಕ್ಕೆ ಸಾವು ಅಂತಾ ಇದ್ಯಾ ?  ಇನ್ನು ಏನೇನೊ ಯೋಚನೆಗಳು. 





ನಾನು ಯೋಗ, ಪ್ರಾಣಾಯಾಮ ಇತ್ಯಾದಿಗಳ ಮೂಲಕ , ಮನಸ್ಸಿಗೆ ಕಡಿವಾಣ ಹಾಕ್ಲಿಕ್ಕೆ ಪ್ರಯತ್ನ ಮಾಡಿದೆ, ಆದ್ರೆ, ಸಾಧ್ಯವಾಗಲೇ ಇಲ್ಲ. ಎಷ್ಟು ಪ್ರಯತ್ನ ಮಾಡಿದ್ರು ಕೂಡ, ಮನಸ್ಸು ನಿರಂತರವಾಗಿ ಯೋಚನೆ ಮಾಡ್ತಾನೆ ಇತ್ತು. ಕಣ್ಣು ಬಿಟ್ಟಿರಲಿ, ಮುಚಿರ್ಲಿ,  ಮನಸ್ಸು ಮಾತ್ರ ಸದಾ ಯೋಚನೆ ಮಾಡ್ತಾನೆ ಇರುತ್ತೆ.  






ಆಮೇಲೆ  ಧ್ಯಾನ ಮಾಡ್ತಾ ಇರೋದ್ರಿಂದನಾದ್ರೂ  ಮನಸ್ಸು ಏನಾದ್ರು , ಧ್ಯಾನದ ಕಡೆಗೆ ಮನಸ್ಸು ಕೊಟ್ಟು, ಯೋಚನೆ ಮಾಡೋದ್ ಬಿಡುತ್ತೇನೋ ಅಂತ , ಧ್ಯಾನದ ಕಡೆ ಗಮನ ಕೊಟ್ಟೆ, , ಏನೂ ಉಪಯೋಗ ಇಲ್ಲ, ಮನಸ್ಸು ಸುಮ್ನೆ ಇರಲೇ ಇಲ್ಲ, ಯಥಾ ಪ್ರಕಾರ ತನ್ನ ಪಾಡಿಗೆ ತಾನು ಯೋಚನೆ ಮಾಡ್ತಾನೆ ಇತ್ತು. ಹಾಗಾದ್ರೆ ಏನು ಮಾಡೋದು, ಪಾಪ , ಈ ಮನಸ್ಸಿಗೆ ಹೇಗೆ ರೆಸ್ಟ್ ಕೊಡೋದು, ಅಂತ  ನನಗೆ ತುಂಬಾ ಚಿಂತೆ  ಹತ್ಕೊಂಡ್ಬಿಟ್ಟಿದೆ. 




ನನಗೆ ಚಿಂತೆ ಅಂದ್ರೆ, ನಾವೇ ನಿರಂತರವಾಗಿ ಮನಸ್ಸನ್ನ ಈ ರೀತಿ ಯೋಚನೆ ಮಾಡೋದಿಕ್ಕೆ ಉಪಯೋಗಿಸ್ತಾ ಇದ್ರೆ, ಅದೂ ಕೂಡ ರೆಸ್ಟ್ ಇಲ್ದೇನೆ , ಅದಕ್ಕೆನಾದ್ರು, ಹುಶಾರಿಲ್ದೇ ಆಗಿ, ಜ್ವರ ಗಿರ ಬಂದು ಮಲ್ಕೊಂಡ್ ಬಿಟ್ರೆ  ಏನ್ಮಾಡೋದು.  










ನಾನು ಕೂಡ ಇಲ್ಲಿ ದೂರದ ಚಂದಿಗಡದಲ್ಲಿ ಒಬ್ಬನೇ, ಒಬ್ಬಂಟಿಗನಾಗಿ ಇದ್ದೇನೆ, ಮನಸ್ಸಿಗೆ ಏನಾದ್ರೂ ಹುಷಾರಿಲ್ಲ ಆದ್ರೆ, ನೋಡ್ಕೋಳೋರ್  ಯಾರು? ಅದೂ ಅಲ್ದೆ ಆ ಮನಸು ಗಂಡೋ ಹೆಣ್ಣೋ ಗೊತ್ತಿಲ್ಲ , ಹಾಗಾಗಿ, ಅಕಸ್ಮಾತ್ ಡಾಕ್ಟರ ಹತ್ತಿರ ಕರ್ಕೊಂಡ್ ಹೋಗಬೇಕಾಗಿ ಬಂದ್ರೆ, ಯಾವ್ ಡಾಕ್ಟ್ರತ್ರ ಕರ್ಕೊಂಡ್ ಹೋಗ್ಲಿ, ಲೇಡಿ ಡಾಕ್ಟ್ರ ಹತ್ರಾನೋ ಅಥವಾ ಗಂಡು ಡಾಕ್ಟ್ರ ಹತ್ರಾನೋ? ಈ ರೀತಿಯ ನೂರಾರು ಸಮಸ್ಯೆಗಳು, ಮನಸ್ಸಿನ ತುಂಬಾ ಇದೆ ರೀತಿಯ ಯೋಚನೆಗಳು. 








ಕೆಲವ ಸಲ ಅನ್ಸುತ್ತೆ, ಜೋಗುಳ ಹಾಡಿ ಮನಸನ್ನ ಮಲಗಿಸ್ಲಾ ಅಂತಾ, ಆದ್ರೆ ನನ್ನ ಜೋಗುಳ ಕೇಳಿದ್ರೆ, ಪಕ್ಕದ್ ಮನೆ ರಾಣಿಯ ಮೂರು ವರ್ಷದ ಸಣ್ಣ ಮಗು ಕುಡು ಹೆದರ್ಕೊಂಡು ಎದ್ದು ಕೂತ್ಕೊಂಡ್ ಅಳೋಕ್ಕೆ ಸುರುಮಾಡಿ ಬಿಡುತ್ತೆ, , ಇನ್ನು ನನ್ನ ಮೃದುವಾದ , ಕೋಮಲವಾದ , ಮನಸು ಅದ್ಹೇಗೆ ತಾನೇ ಮಲ್ಕೊಂಡ್ ಬಿಡುತ್ತೆ. 
                                                    
ಹಾಗಾಗಿ ಆ ಯೋಚನೆ ಬಿಟ್ಟು ಬಿಟ್ಟೆ. ಕಡೆಗ ಅಂದ್ಕೊಂಡೆ, ನಮಗೆಲ್ಲ ರಾತ್ರಿ ಎರಡು ಪೆಗ್ ಹೊಡೆದ ತಕ್ಷಣ ಒಳ್ಳೆ ನಿದ್ದೆ ಬಂದ್ ಬಿಡುತ್ತೆ, , ನನ್ನ ಮನಸಿಗೂ ಕೂಡ , ಎರಡು ಪೆಗ್ ಹೊಡ್ಸಿಬಿಟ್ರೆ ಹ್ಯಾಗೆ ಅಂತ. ಆಮೇಲೆ ಅನ್ನಿಸ್ತು , 




ನಂಗೇನೋ ಪೆಗ್ ಹೊಡ್ದು ಅಭ್ಯಾಸ ಇದೆ, ಆದ್ರೆ ಆ ಮನಸಿಗೆ ಅಭ್ಯಾಸ ಇರಬೇಕಲ್ಲ. ಎಲ್ಲಾದ್ರು ಟೈಟ್  ಆಗಿ ಖಾಯಂ ಆಗಿ ಮಲ್ಕೊಂಡ್ ಬಿಟ್ರೆ , ನನ್ನ ಯೋಚನಾ ಲಹರಿಯ ಗತಿಯೇನು , ಅನ್ನಿಸಿ ಬಿಡ್ತು, ಹಾಗಾಗಿ ಅದನ್ನು ಕೈ ಬಿಟ್ ಬಿಟ್ಟೆ. . 
ನನಗೆ ನನ್ನ ಮನಸ್ಸಿನ ಬಗ್ಗೆ, ಅದರ ಆರೋಗ್ಯದ ಬಗ್ಗೆ ತುಂಬ ಚಿತೆಯಾಗಿ ಬಿಟ್ಟಿದೆ, ಹಾಗಾಗಿ ನನ್ನ ಮನಸ್ಸು, ಅದ್ರ ಬಗ್ಗೆನೇ ತುಂಬ ಯೋಚನೆ ಮಾಡ್ತಾ ಇದೆ. ನಿಮಗೆ ಏನಾದ್ರು ದಾರಿ ಗೊತ್ತಿದ್ರೆ, ದಯವಿಟ್ಟು ತಿಳಿಸ್ತೀರ





ಮನಸ್ಸಿನ ಇನ್ನೊಂದು ವಿಶೇಷತೆ ಅಂದ್ರೆ, ಪ್ರತಿಯೊಬ್ಬ ಮನುಷ್ಯ , ಪ್ರಾಣಿಯಲ್ಲು ಕೂಡಾ ಮನಸ್ಸು ಅಂತ ಇರುತ್ತೆ, ಮತ್ತೆ ಅದೂ ಯೋಚನೆ ಮಾಡ್ತಾನೆ ಇರುತ್ತೆ. ಪ್ರತಿಯೊಬ್ಬರ ಯೋಚನಾ ಲಹರಿ, ಯೋಚನೆಯ ಧಾಟಿ, ವಿಷಯ , ಎಲ್ಲವೂ ಬೇರೆ ಬೇರೆ ಆಗಿರುತ್ತೆ. ಅಂದ್ರೆ, ಪ್ರಪಂಚದಲ್ಲಿ, ೪೦೦ ಕೋಟಿ ಜನ ಇದ್ದಾರೆ ಅಂದ್ರೆ, ೪೦೦ ಕೋಟಿ ರೀತಿಯ , ೪೦೦ ಕೋಟಿ ಬೇರೆ ಬೇರೆ ವಿಷಯಗಳ ಬಗ್ಗೆ ಮನಸ್ಸು ಯೋಚನೆ ಮಾಡ್ತಾ ಇರುತ್ತೆ. ಅಬ್ಬ , ಯೋಚನೆ ಮಾಡಿದ್ರೆ, , ನನ್ನ ಮನಸಿಗೆ ಆಶ್ಚರ್ಯ ಆಗುತ್ತೆ, , ಮತ್ತು ನನ್ನ ಮನಸು ಅದ್ರ ಬಗ್ಗೆನೇ ಯೋಚನೆ ಮಾಡ್ಲಿಕ್ಕೆ ಸುರು ಮಾಡುತ್ತೆ. 

ಮನುಷ್ಯ ಯಾವಾಗಲು, ಮನಸ್ಸಿನಲ್ಲಿ ಇದ್ದಿದ್ದನ್ನೇ ಬಾಯಲ್ಲೂ ಹೇಳಿ ಬಿಡ್ತಾನೆ ಅಂತ ಏನು ಇಲ್ಲ. ಮನಸ್ಸು ಒಂದು ಯೋಚನೆ ಮಾಡ್ತಾ ಇರುತ್ತೆ, ಆದ್ರೆ, ಬಾಯಿ ಮಾತ್ರ ಬೇರೇನೆ ಏನಾದ್ರು ಹೇಳ್ತಾ ಇರುತ್ತೆ. ಹಾಗಾಗಿ, ಬೇರೆಯವರ ಮನಸು ಏನು ಯೋಚನೆ ಮಾಡ್ತಾ ಇದೆ ಅಂತ , ನಮ್ಮ ಮನಸಿಗೆ ಗೊತ್ತಾಗೋದೇ ಇಲ್ಲ.




 ಅಕಾಸ್ಮಾತ್, ಮೊಬೈಲ್ ನಲ್ಲಿ, ಇದ್ದಂತ, ನಮ್ಮ ಮನಸ್ಸಿಗೂ ಕೂಡ, ಬ್ಲೂ ಟುಥ್ ಅಂತ ಇದ್ದಿದ್ರೆ, ಎಷ್ಟು ಚೆನ್ನಾಗಿತ್ತು. ಪಕ್ಕದ ಮನೆ ರಾಣಿ ನನ್ನ ಬಗ್ಗೆ ಏನ್ ಯೋಚನೆ ಮಾಡ್ತಾ ಇದ್ದಾಳೆ ಅಂತ ನಾನು ಕುಡ್ಲೆ ತಿಳ್ಕೋ ಬಹುದಿತ್ತು. ನನ್ನ ಬ್ಲೂ ಟುಥ್ ನ್ನು , ಅವಳ ಮನಸ್ಸಿನ ಜೊತೆ ಜೋಡ್ಸಿ ಬಿಟ್ರೆ ಸಾಕಾಗಿತ್ತು, , ಕೂಡಲೇ, ಅವಳ ಮನಸ್ಸಿನಲ್ಲಿದ್ದಿದ್ದೆಲ್ಲ ನನ್ನ ಮನಸಿಗೆ ವರ್ಗಾವಣೆ ಆಗಿ ಬಿಡ್ತಾ ಇತ್ತು. 



ಇದ್ರಲ್ಲಿ, ಅಪಾಯನು ಇದೆ, ಯಾಕೆ ಅಂದ್ರೆ, ಅಕಸ್ಮಾತ್ ಅವ್ಳು ಮನಸೊಳಗೆ ನನ್ನನ್ನು "ಅಂಕಲ್ " ಅಂತಾ ಏನಾದ್ರು ಅಂದ್ಕೊಂಡಿದ್ರೆ, . 




ಇದರೊಳಗೆ ಇನ್ನೊದು ಅಪಾಯನು ಇದೆ, ಅದೂ ಅಂದ್ರೆ, ಅದೇ, ಬ್ಲೂ ಟೂಥ್ ಉಪ್ಯೋಗ್ಸಿ ಕೊಂಡು, ನನ್ನ ಹೆಂಡ್ತಿ ಏನಾದ್ರು , ನನ್ನ ಮನಸ್ಸು ಮಾಡ್ತಾ ಇರೋ ಯೋಚನೆಗಳನ್ನೆಲ್ಲ ತನ್ನ ತಲೆಗೆ ವರ್ಗ ಮಾಡ್ಕೊಂಡ್ ಬಿಟ್ರೆ, , ಅಯ್ಯಯ್ಯಪ್ಪ, ಬೇಡ, ಈ ಬ್ಲೂ ಟೂತು ಬೇಡ, ಈ ಮನಸ್ಸಿನ ಯೋಚನೆ ಗಳು ಬೇಡ. 

ರಾತ್ರಿ ಭಾಳ ಹೊತ್ತಾಯ್ತು, ಯಾಕೋ ಮನಸಿಗೆ ಭಾಳ ಸುಸ್ತಾಗ್ತಿದೆ, ಇನ್ನು ಮಲ್ಕೊಂಡ್ ಬಿಡ್ತೀನಿ, ಓ,ಕ , ನನ್ನ ಕೋಮಲವಾದ ಮನಸ್ಸೇ, ಶುಭ ರಾತ್ರಿ, , ಚೆನ್ನಾಗಿ ಮಲ್ಕೊಂಡು , ನನಗೋಸ್ಕರ ಒಳ್ಳೊಳ್ಳೆ ಕನಸುಗಳನ್ನು ಕಾಣು.

Tuesday, 20 September 2011

ನಂದು ಒಂದು ಬ್ಯಾಂಕು

ನಂದು ಒಂದು ಬ್ಯಾಂಕು 

ನಾನು ರಾಷ್ಟ್ರಿಕ್ರತ ಬ್ಯಾಂಕ್ ಒಂದರಲ್ಲಿ  ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಾ ಇದ್ದೇನೆ. ಕರ್ತವ್ಯ ಏನು ನಿರ್ವಹಿಸೋದು ಬಂತು, ಹೊಟ್ಟೆ ಪಾಡಿಗಾಗಿ, ಬೇಡೋ ಕೆಲಸ ಮಾಡ್ತಾ ಇದ್ದೀನಿ.


 ಯಾಕೆ ಬೇಡೋ ಕೆಲಸ ಮಾಡ್ತಾ ಇದ್ದೀನಿ ಅಂತ ಹೇಳ್ದೆ ಅಂದ್ರೆ , ಇವತ್ತು ನಮ್ಮ ಬ್ಯಾಂಕ್ನವರ ಕೆಲಸ ಕೂಡ ಒಂದ್ ತಾರಾ ಬೆಡೋದೇ ಆಗಿದೆ. ಒಂದೇ ವ್ಯತ್ಯಾಸ ಅಂದ್ರೆ ನಾವು, ಪ್ರೊಫೆಶನಲ್ ಬಿಕ್ಷುಕರ ತರಹ " ಅಮ್ಮಾ ತಾಯೇ ಬಿಕ್ಷಾ ನೀದಮ್ಮಾ ಅಂತನೋ , ಅಥವಾ ಶಿವಪ್ಪಾ ಕಾಯೋ ತಂದೆ  ಅಂತನೋ ,ಹೇಳಿ ಭಿಕ್ಷೆ ಬೇಡುವುದಿಲ್ಲ . ಅದರ ಬದಲಿಗೆ, ನಾವು ಒಂತರ ಫೈವ್ ಸ್ಟಾರ್ ಸ್ಟೈಲ್ ನಲ್ಲಿ ಭಿಕ್ಷೆ ಬೇಡ್ತೀವಿ.





ನೀವು ಬೆಂಗಳುರಿನಲ್ಲಿ ಎಂ ಜಿ ರಸ್ತೆಯಲ್ಲಿ ಯಾವತ್ತಾದ್ರು ಉತ್ತಮವಾದ ಏ ಸಿ ಕಾರಿನಲ್ಲಿ ಹೋದ್ರೆ, ಸಿಗ್ನಲ್ಲಿನಲ್ಲಿ ನಿಂತು ಕೊಂಡರೆ , ನಿಂತುಕೊಳೋದ್ ಏನ್ ಬಂತು, ನಿಂತ ಕೊಳಲೇ ಬೇಕು, ಆಗ ನಿಮಗೆ ಕೆಲವು ಟೈ , ಕೋಟು ಹಾಕಿ ಹಾಕಿ ಕೊಂದ ಕೆಲವು ವ್ಯಕ್ತಿಗಳೊಂದಿಗೆ ಸಂಪರ್ಕವಾಗುತ್ತದೆ. ಅವರು ಬಹಳ ಸ್ಟೈಲಾಗಿ ಬಂದು ನಿಮ್ಮ ಏ ಸಿ ಕಾರಿನ ಗ್ಲಾಸ್ಸಿಗೆ ಟಕ್ ಟಕ್ ಮಾಡುತ್ತಾರೆ. ನೀವೇನಾದ್ರು ಗ್ಲಾಸ್ಸ್ ಕೆಳಗೆ ಇಳಿಸಿದರೆ , ಕೂಡಲೇ ಅವರ ಬಾಯಿಯಿಂದ ಅತಿ ನಯವಾದ ಮಾತಿನ ಮುತ್ತುಗಳು ನಿಮ್ಮತ್ತ ಉದುರುತ್ತವೆ, " ಎಕ್ಷ್ಕುಸ್ ಮಿ ಸರ್ " ಅಂತ . ನೀವೇನಾದ್ರು ಯಾರೋ ಪಾಪ ದಾರಿ ಗೀರಿ ತಪ್ಪಿದ್ದಾರೆನೋ ಅಂತ , "ಎಸ್ ಪ್ಲೀಸ್ " ಅಂದ್ರೆ ಸಾಕು , ಕೂಡ್ಲೇ ಅವರ ಬಾಯಿಯಿಂದ ಮುಂದಿನ ಮುತ್ತುಗಳು ಉದುರುತ್ತವೆ, " ಸರ್ ಕೆನ್ ಆಯ ಹೇವ್ ಹಂಡ್ರೆಡ್ ರುಪೀಸ್ ಪ್ಲೀಸ್ " . ಇದು ಎಂ ಗಿ ರೋಡಿನ ಫೈವ್ ಸ್ಟಾರ್ ಬಿಕ್ಷುಕರ ಒಂದು ಲೈವ್ ಉದಾಹರಣೆ, ನಾನು ಕಣ್ಣಾರೆ ಕಂಡಿದ್ದು.  ನಮ್ಮ ಪಾಡು ಇದಕ್ಕಿಂತ ತುಂಬಾ ಭಿನ್ನವೆನಾಗಿಲ್ಲ. ಆದರೆ ಇದಕ್ಕಿಂತ ಸ್ವಲ್ಪ ಉನ್ನತ ಶೈಲಿಯಲ್ಲಿ , ಸೆವೆನ್ ಸ್ಟಾರ್  ಶೈಲಿಯಲ್ಲಿ, ಬೇಡುತ್ತೇವೆ.



 ಇವತ್ತು ನಮ್ಮ ಎಲ್ಲ ಪ್ರಾಡಕ್ಟ್ ಗಳನ್ನೂ  ನಾವು ಮಾರುಕಟ್ಟೆಯಲ್ಲಿ ತರಕಾರಿ ಮಾರುವಂತೆ ಮಾರುತ್ತಿದ್ದೇವೆ. ಇಲ್ಲಿ ನಮ್ಮ ಮನೆಯ ಬಳಿ ತರಕಾರಿ , ಹಣ್ಣು ಮಾರುವವನು , ಬೆಳಿಗ್ಗೇನೆ ಕೂಗ್ತಾ ಹೋಗ್ತಾನೆ " ಆಲೂ ಬೆಂಡೆ ಟೊಮೇಟೊ ನೀರುಳ್ಳಿ ಬೀನ್ಸು " . ಅವನ ಕೂಗು ಒಂಥರಾ ನನಗೆ ಅಲಾರಂ ಇದ್ದ ಹಾಗೆ. ನಾವು ಬ್ಯಾಂಕ್ನವರು ಕೂಡ ಒಂಥರಾ ಅವ್ರ ಹಾಗೇನೆ, ಒಂದೇ ವ್ಯತ್ಯಾಸ ಅಂದ್ರೆ , ನಾವು ಅವ್ರ ಹಾಗೆ ಬೆಳಿಗ್ಗೆ ಹೋಗೋದಿಲ್ಲ , ಯಾಕೆ ಅಂದ್ರೆ ನಮಗೆ ಬೆಳಿಗ್ಗೆ ಅಷ್ಟು ಬೇಗ  ಏಳೋದೇ ಗೊತ್ತಿಲ್ಲಾ , ರಾತ್ರಿ ಟೈಟ್ ಆಗಿ ಮಲ್ಕೊಂಡ್ಮೇಲೆ , ಅಷ್ಟು ಬೇಗ ಏಳೋದು ಹ್ಯಾಗೆ. ಹಾಗೇನೆ ಅವ್ರ ಹಾಗೆ ನಮ್ಮ ಪ್ರಾಡಕ್ಟ್ ಹೆಸರು ಹೇಳ್ಕೊಂಡು ಕುಗ್ಲಿಕ್ಕು ನಮಗೆ ಬರೋದಿಲ್ಲ. ಹಾಗಾಗಿ ನಾವೊಂತರ ಸೆವೆನ್ ಸ್ಟಾರ್ ಸೇಲ್ಸ್ ಮ್ಯಾನ್ ಗಳು ಹಾಗು ಬೇಡುವವರು




. ರೋಡ ಷೋ ಹೆಸರಿನಲ್ಲಿ ಇವತ್ತು ಕಂಡ ಕಂಡ ರಸ್ತೆಗಳಲ್ಲಿ , ಉನಿಫಾರ್ಮ್ ಹಾಕಿಕೊಂಡು , ಒಂದು ಬ್ಯಾಂಕಿನ ಹೆಸರು ಇರೋ ಕೊಡೆ ಹಾಕ್ಕೊಂಡು , ರಸ್ತೆಯಲ್ಲಿ ಬರೋ ಹೊಗೊರಿಗೆಲ್ಲ , ನಿಲ್ಲಿಸಕೊಂಡು ಬೇಡ್ತಾ ಇರ್ತಿವಿ. ಇದನ್ ನೋಡ್ಕೊಂಡು ನನ್ನ ಕೆಲವು ಸ್ನೇಹಿತರು ಹೇಳ್ತಾ ಇರ್ತಾರೆ, "ಅಯ್ಯೋ ಪಾಪ". ಕೆಲವರಂತೂ ನಾವು "ಎಕ್ಸುಸ್ ಮಿ ಸಾರ್ " ಅಂತ ಹೇಳ್ದಾಗ, ತಿರಸ್ಕಾರದಿಂದ ನಮ್ಮ ಕಡೆ ಒಂಥರಾ ಬಿಕ್ಷುಕರನ್ನು ನೋಡಿದ ಹಾಗೆ ನೋಡಿದಾಗ , ಯಾಕಾದ್ರೂ ಬ್ಯಾಂಕ್ ಸೇರಿದ್ನೋ, ಸೇರಿದ್ರೂ ಕೊಡ ಇನ್ನು ತನಕ ಯಾಕಾದ್ರೂ ಬ್ಯಾಂಕ್ನಲ್ಲೆ ಇದ್ದೀನಿ ಅಂತ ಅನ್ಸುತ್ತೆ. ನನ್ನ ಬಗ್ಗೆ ನನಗೆ ಜಿಗುಪ್ಸೆ ಬರುತ್ತೆ. ಆದ್ರೆ ಏನು ಮಾಡೋದು, ಕೆಲಸ ಬಿಟ್ರೆ, ಹೆಂಡ್ತಿನು ಕೇಳಲ್ಲ, ಹೇಳ್ತಾಳೆ, " ಕೆಲಸ ಬಿಡಬೇಡಿ, ಕೆಲಸ ಬಿಟ್ರೆ ಇಲ್ಲಿ ಮನೆಯಲ್ಲಿ ಇದ್ದವರಿಗೆಲ್ಲ ತೊಂದ್ರೆ ಕೊಡ್ತಾ ಇರ್ತೀರಾ, ನೀವ್ ಬ್ಯಾಂಕಲ್ಲಾದ್ರು ಇರಿ, ರೋಡಲ್ಲಾದ್ರು ಇರಿ, ಆದ್ರೆ ಕೆಲಸ ಬಿಟ್ಟು ಮನೆಯಲ್ಲಿ ಮಾತ್ರ ಇರಬೇಡಿ" ಆಯ್ತಲ್ಲ, ಹೋಗಲೇ ಬೇಕು.




ಆದ್ರೆ ಈ ರೀತಿಯ ಕೆಲಸ ಗಳಲ್ಲಿ ಎಲ್ಲರಿಗೂ ಬೇಸರ ಇರಬೇಕು ಅಂತ ಏನು ಇಲ್ಲ. ನನ್ನ ಸ್ನೇಹಿತ ಇದ್ದಾನೆ. ಅವನಿಗೆ ಬಹಳ ಖುಷಿ, ಹೊರಗಡೆ ರೋಡ ಷೋಗೆ ಹೋಗೋದು ಅಂದ್ರೆ, ಯಾಕೋ ಅಂತ ಕೇಳಿದ್ರೆ, ಯಾರು ಮಾರಾಯ ಅ ಬ್ಯಾಂಕಿನ ಒಳಗೆ ಗ್ರಾಹಕರ ಬಯ್ಯುಗಳನ್ನು ಕೇಳೋದು, ಆ ಕಂತ್ರಿ ಮಾನೆಜರಿನ ಪುರಾಣ ಕೇಳುವುದು, ಅದರ ಬದಲಿಗೆ ಇಲ್ಲಿ ಓಡಾಡೋದು ಸುಲಭ. ಇಂಥವರು ಕೂಡ ಇರ್ತಾರೆ.








                                                     ( ಮೆನೆಜರಿಗೆ ಒದೆಯಲು ಸ್ಪರ್ಧೆ )
ಇನ್ನು ಮ್ಯನಜೆರ್ ಆದರಂತೂ ಮುಗಿಯಿತು. ಅವ್ರು ಒಂಥರಾ ಫೂಟ್ ಬಾಲ್ ಇದ್ದಂತೆ. ಒಂದು ಕಡೆಯಿಂದ ಹೆಡ್ಆಫೀಸ್ ನವರು ಓದೀತ ಇದ್ರೆ, ಮತ್ತೊಂದು ಕಡೆಯಿಂದ ಜೋನಲ್ ಆಫೀಸ್ನವರು ಓದೀತ ಇರ್ತಾರೆ. ಅಷ್ಟಕ್ಕೆ ಸಾಲದು ಅಂತ ಸ್ಟಾಫ್ ನವರು ಕೂಡ ನಾವೇನು ಕಡಮೆ ಅಂತ್ಹೇಳಿ ತಮ್ಮದು ಎರಡು ಒದೆ ಓದಿತಾರೆ. ಇನ್ನೇನು ಸುಧಾರ್ಸ್ಕೊತಿನಿ ಅಂತ ಅಂದ್ಕೊಳ್ತಿರುವಾಗಲೇ  ಕಸ್ಟಮರ್ ಓಡೋಡಿ ಬರ್ತಾನೆ, ಅಯ್ಯೋ ಸ್ವಾಮಿ ಸ್ವಲ್ಪ ತಡೀರಿ, ನಾನಿನ್ನು ಓದ್ದೆ ಇಲ್ಲ, ಅಂತ್ಹೇಳಿ ಅವನದು ಎರಡು ಒದೆ ಒದ್ದು ಹೋಗ್ತಾನೆ.  ಇಷ್ಟೆಲ್ಲಾ ಅದ್ರು, ನೀವು ಸಿಟ್ಟು ಮಾಡ್ಕೊಳ್ಳೋ ಹಾಗಿಲ್ಲ, ಆ ಹಕ್ಕನ್ನು ನಿಮಗೆ ಬ್ಯಾಂಕ್ನವರು ನಿಮಗೆ ಇನ್ನು ಕೊಟ್ಟಿಲ್ಲ. ಅಷ್ಟೆಲ್ಲ ಓಡಿಸ್ಕೊಳ್ತಾ ಇರುವಾಗಲೂ ಕೂಡ ನೀವು ನಗ್ ನಗ್ತಾ ಇರಬೇಕು. ಮನ್ಸ್ಒಳಗೆ ಎಷ್ಟು ಬೇಕಾದ್ರೂ ಬಯ್ಕೋಬಹುದು. ಆದ್ರೆ ಬೇರೆ ಯವರಿಗೆ ಕೇಳ್ಸೋ ಹಾಗೆ ಬಯುವಂತಿಲ್ಲ . ಇಂಥ ಸಮಯದಲ್ಲಿ ನೀವು ಮುನ್ನಾ ಭಾಯಿ ಎಂ ಬಿ ಬಿ ಎಸ್ ನಲ್ಲಿರುವ ಬೊಮ್ಮನ್ ಇರಾನಿಯನ್ನು ಜ್ಞಾಪಕ ಮಾಡಿಕೊಳ್ಳಿ, ಕಷ್ಟ ಬಂದಾಗಲೆಲ್ಲ ಜೋರಾಗಿ ನಗುವುದು, ಚೆನ್ನಾಗಿ ಅಭ್ಯಾಸ ಮಾಡಿಕೊಳ್ಳಿ.


                                                        ( ಮೆನೆಜರಿಗೆ ಒದ್ದಿದ್ದಕ್ಕಾಗಿ ಸಂಭ್ರಮ ಪಡುತ್ತಿದ್ದಾರೆ )


                                                  ( ಮೆನೆಜರಿಗೆ ಒದೆಯಲು ಸಿದ್ದರಾಗಿರುವ ಫುಟ್ಬಾಲ್ ಟೀಮ್ )

                                                     ( ಮೆನೆಜರನ್ನು ಒದೆಯಲು ಸ್ಪರ್ಧೆ )
ಇಷ್ಟೆಲ್ಲದರ ಮಧ್ಯೆ ನೀವು ವ್ಯವಹಾರಗಳನ್ನೂ ಮಾಡಬೇಕು, ನಿಮಗೆ ಕೊಟ್ಟ ವ್ಯವಹಾರದ ಗುರಿಗಳನ್ನು ಕೂಡ ಮುಟ್ಟಬೇಕು. ಇಲ್ಲಿ ಬೇಕಾಗುತ್ತದೆ ನಿಮಗೆ ಎಂ ಗಿ ರೋಡಿನ ಆ ಭಿಕ್ಷುಕನ ನೆನಪು ಹಾಗು ಕಲೆ. ತುಂಬಾ ನಯವಾಗಿ , ವಿನಯವಾಗಿ, ಬಂದವರಿಗೆ ಪಾನೀಯ , ಉಡುಗೊರೆಗಳನ್ನು  ನೀಡಿ, ನಂತರ ನೀವು ಭಿಕ್ಷೆ ಬೇಡಬೇಕಾಗುತ್ತದೆ. ಒಮ್ಮೆಲೇ ನೀವು ಬೇಡುವಂತಿಲ್ಲ. ಹಾಗೇನಾದರು ಬೇಡಿದಲ್ಲಿ, ಮತ್ತೆ ನಿಮಗೆ ತಿರಸ್ಕಾರದ ನೋಟ ಮಾತ್ರ ಲಭ್ಯ. ಸರಕಾರ ಭಿಕ್ಷಾಟನೆಯ ಮುಲೋಚಾಟನೆ ಮಾಡ ಬೇಕು ಅಂತ ಯೋಜನೆಗಳನ್ನು ಹಾಕಿದಾಗ ಅವರಿಂದ ಬಚಾವಾಗಿ ನೀವು ಭಿಕ್ಷಾಟನೆ ಮಾಡ ಬೇಕು. ಹಾಗಾಗಿ ನೀವು ಭಿಕ್ಷೆ ಬೆಡ್ತಾ ಇದ್ದೀರಿ ಅಂತ ಯಾರಿಗೂ ಗೊತ್ತಾಗಬಾರದು.





 ಹಾಗಾಗಿಯೇ ಬ್ಯಾಂಕಿನಲ್ಲಿ ಮ್ಯನಜರುಗಳಿಗೆ ಪ್ರತ್ಯೇಕ ಬಂದ್ ಮಾಡುವಂತಹ "ಕ್ಯಾಬಿನ್" ಎಂಬ ಹೆಸರಿನ ರೂಮನ್ನು ಕೊಡುವುದು,  ಅವರ ಭಿಕ್ಷಾಟನೆ ಯಾರಿಗೂ ಗೊತ್ತಾಗ ಬಾರದು ಅಂತ. ಯಾರಿಗೆ ಗೊತ್ತಿತ್ತು , ಒಂದು ಕಾಲದಲ್ಲಿ ವೈಟ್ ಕಲರ್ ಜಾಬ್ ಅನಿಸಿ ಕೊಂಡ ಈ ಕೆಲಸ ಇವತ್ತು ಟೈಟ್ ಟೆರರ  ಜಾಬ್ ಆಗುತ್ತೆ  ಅಂತ. ಇಷ್ಟೆಲ್ಲಾ ಸತ್ಕಾರ ಅದ್ಮೇಲು ಕೂಡ ಬಂದವನು ನಿಮಗೆ ಭಿಕ್ಷೆ ಕೊಡ್ತಾನೆ ಅಂತ ಏನು ಗಾರಂಟೀ ಇಲ್ಲ. ಹಾಗಾಗಿ ನೀವು ಬಂದವನ ಮೂಡನ್ನು ಮೊದಲೇ ಗ್ರಹಿಸುವಂತಹ ಕಲೆಯನ್ನು ನಿಮ್ಮೊಳಗೆ ಮೆಳಯ್ಸಿಕೊಂಡಿರಬೇಕು , ಯಾಕೆ ಅಂದ್ರೆ ಅವ್ರು ಬಂದಾಗ ಅವರಿಂದ ಏನೂ ಲಾಭ ಇಲ್ಲ ಅಂತ ಅನುಮಾನ ಬಂದ್ರೆ, ಪಾನೀಯ ಹೇಳುವಾಗ, ಗುಜರಾತಿನ ಮಾರವಾಡಿಗಳ ನೆನಪು ಬರಬೇಕು. ಬ್ಯಾಂಕಿನ ಚಪರಾಸಿಯ ಹತ್ತಿರ ಪಾನಿಯಕ್ಕೆ ಹೇಳುವಾಗ, ಹೇಳಿದಂತಿರಬೇಕು, ಆದರೆ ಒಂದು ಘಂಟೆ ಕಳೆದರು ಪಾನೀಯ ಬರಬಾರದು, ಬಂದ ಗ್ರಾಹಕ ಬೇಜಾರಾಗಿ ಎದ್ದು ಹೋಗ ಬೇಕು. ಆಗ ನೀವು ಬೇಕಾದರೆ ಗ್ರಾಹಕನ ಎದುರು ಚಪರಾಸಿಗೆ ಬಯಿರಿ, ಆದರೆ ಒಂದು ಜಾಗ್ರತೆ ನೋಡಿಕೊಳ್ಳಿ, ಆ ಸಮಯದಲ್ಲಿ, ಚಪರಾಸಿ ಮಾತ್ರ ಅಲ್ಲಿಗೆ ಬರಬಾರದು, ಇಲ್ಲ ಅಂದ್ರೆ ಅವ್ನು ನಿಮ್ಮ ಆರತಿ ಎತ್ತಿ ಬಿಡ್ತಾನೆ.






ಇಷ್ಟೆಲ್ಲಾ ಕಷ್ಟ ಪಟ್ಟ ಮೇಲೆ, ಅಕಸ್ಮಾತ್ ಬಂದ ಗ್ರಾಹಕ ನಿಮಗೆ ಏನಾದ್ರು ಭಿಕ್ಷೆ ಕೊಟ್ ಬಿಟ್ಟ ಅಂತ ಮಾಡಿ, ಅಗ್ಲಾದ್ರು ಸುಖ ಇದ್ದೀಯ?  ಖಂಡಿತ ಇಲ್ಲ,  ಆಗ ನೀವು ಇನ್ನೊಂದು ಕಡೆ ಹೋಗ್ಬೇಕು , ಬೇಡ್ಲಿಕ್ಕೆ.  ಈಗ ನೀವ್ ಹೋಗ್ಬೇಕು, ಗುಮಾಸ್ತ ಎಂಬ ನರ ಹಂತಕನ ಬಳಿ. ಅವ್ರು ನಿಮ್ಮನ್ನು ಬರೀ ಕಣ್ಣಿನಲ್ಲೇ ನುಂಗಿ ಹಾಕಿ ಬಿಡ್ತಾರೆ.  ಪುನಃ ಇವರತ್ರ ಬೇಡ ಬೇಕು. ಇಲ್ಲಿ ಮತ್ತೆ ನಿಮ್ಮ ತಾಳ್ಮೆಯನ್ನು ಒರೆ ಹಚಲಾಗುತ್ತದೆ. ಅದರಲ್ಲಿ ನೀವು ಪಾಸ್ ಆದ್ರೆ ಮಾತ್ರ ನಿಮ್ಮ ಭಿಕ್ಷೆ ಎಂಬ ವ್ಯವಹಾರ ಕುದುರುತ್ತದೆ. 

ಇಷ್ಟೆಲ್ಲಾ ಅದ್ಮೆಲಾದ್ರು ಖುಷಿ ಇದೆಯಾ , ಖಂಡಿತ ಇಲ್ಲ. ಸಾಲ ಕೊಡ್ಲಿಕ್ಕೊಸ್ಕರ ಕೂಡ ಇವತ್ತು ಗ್ರಾಹಕರ ಮನೆ ಬಾಗಿಲಿಗೆ ಹೋಗ ಬೇಕು. ಅವನ ನೂರಾರು ಪ್ರಶ್ನೆಗಳಿಗೆ , ಕೋರ್ಟಿನ ಕಟಕಟೆಯಲ್ಲಿ ನಿಂತು ಜವಾಬು ನೀಡಿದಂತೆ , ಉತ್ತರ ನೀಡ ಬೇಕು. ಹೋಗ್ಲಿ ಸಾಲ ಕೊಟ್ರೆ ಅಷ್ಟೇ ಮುಗೀತಾ, ಇಲ್ಲ , ಖಂಡಿತ ಇಲ್ಲ. ಅಲ್ಲಿಂದ ನಿಮ್ಮ ಚಕ್ರವ್ಯುಹವೆಂಬ ಸಮಸ್ಯೆಗಳ ಸುಳಿ ಪ್ರಾರಂಭವಾಗುತ್ತದೆ. ಆ ಗ್ರಾಹಕನಿಗೆ ಹುಶಾರಿಲ್ಲವೆಂದರೆ ನಿಮಗೆ ಚಳಿ ಜ್ವರ ಬರುತ್ತದೆ. ಅವನಿಗೆ ಬಿಸಿನೆಸ್ಸಿನಲ್ಲಿ ನಷ್ಟವಾದರೆ ನಿಮಗೆ ತಲೆ ನೋವು ಪ್ರಾರಂಭವಾಗುತ್ತದೆ. ಅವನು ಒಂದು ತಿಂಗಳ ಕಂತು ಕತ್ತಲಿಲ್ಲವೆಂದರೆ ನಿಮಗೆ ರಾತ್ರಿ ಇಡೀ ನಿದ್ದೆ ಬರುವುದಿಲ್ಲ. ಒಟ್ಟಿಗೆ ಸಾಲ ಕೊಟ್ಟ ನಂತರ ನಿಮ್ಮ ಸಮಸ್ಯೆಗಳು ನೂರ್ಪಾಲು ಹೆಚ್ಹಾಗಿ , ನೀವು ಹುಚ್ಹಾಗಿ, ಯಾವಾಗಲು ಪೆಚ್ಹಾಗಿ, ದಾರಿ ಕನದಂತಾಗಿ ರಾತ್ರಿಯೆಲ್ಲ ಕನಸ್ಸಿನಲ್ಲಿ , "ವಿಜಿಲೆನ್ಸ್ " ಎಂಬ ಭೂತದ ಕಾಟ ಹೆಚ್ಹಾಗಿ , ರಕ್ತದೊತ್ತಡ , ಸಕ್ಕರೆ ಖಾಯಿಲೆ ಮುಂತಾದ ಸಂಗಾತಿಗಳ ಒಡನಾಡಿಯಾಗಿ , ಜೀವನವೇ ಬೇಸರವೆನಿಸುತ್ತದೆ. ಈ ರೀತಿ ರಾತ್ರಿ ೨ , ೩ ಘಂಟೆಯ ಹೊತ್ತಿಗೆ ನಿಮಗೆ ಪಶಾತ್ತಪವಗುತ್ತದೆ, ಅಯ್ಯೋ ನಾನು ಯಾಕೆ ಮ್ಯಾನೇಜರ್ ಪದವಿಯನ್ನು ತೆಗೆದುಕೊಂಡೆ ಎಂದು. ನಿಮ್ಮ ಸಹೋದ್ಯೋಗಿಯಿನ್ನು  ಗುಮಾಸ್ತನಾಗಿ , ಎಲ್ಲರನ್ನು ಫುಟ್ಬಾಲ್ನಂತೆ ಒದೆಯುತ್ತ , ಸುಖವಾದ ನಿದ್ದೆಯೊಂದಿಗೆ ತನ್ನ ಜೀವನ ಸವೆಸುವುದನ್ನು ನೋಡಿದಾಗಲಂತೂ , ನಿಮ್ಮ ಮೂರ್ಖತನದ ಬಗ್ಗೆ ನಿಮಗೆ ಖಾತರಿಯಾಗುತ್ತದೆ. 



ಈಗಲಾದರೂ ಅರಿವಾಯ್ತಾ, ಯಾಕೆ ನಾನು ಅವಾಗಾವಾಗ ಹುಚನಂತೆ ಆಡ್ತಾ ಇರ್ತೇನೆ ಅಂತ? ಈಗ ಅರ್ಥ ಆಯ್ತಾ ನನ್ನ ತಲೆ ಮೇಲೆ ಒಂದು ಕೂಡ ಕೂದಲು ಯಾಕೆ ಇಲ್ಲ ಅಂತ ?



ಹುಷಾರಾಗಿರಿ, ನಿಮ್ಮ ಮೇಲಿನ ಅಧಿಕಾರಿಗಳು, ನಾನಾ ರೀತಿಯ ಬಕರಾಗಳನ್ನು , ಹುಡುಕುತ್ತ ಇರ್ತಾರೆ, ಎಚ್ಹರಿಕೆ , ಅಪ್ಪಿ ತಪ್ಪಿಯೂ ಅವರ ಮುಂದೆ ಕನಿಸಿಕೊಳ್ಳಬೇಡಿ, ಇಲ್ಲವಾದರೆ, ಕೂಡಲೇ, ಬಲಿ ಕೊಡುವ ಮುನ್ನ ಕುರಿಗೆ ಹಾರ ತುರಾಯಿ ಹಾಕಿ, ಬ್ಯಾಂಡು ಬಜಾ ಬಜಂತ್ರಿಗಳೊಂದಿಗೆ ಸನ್ಮಾನ ಮಾಡಿದಂತೆ , ನಿಮಗೂ ಕೂಡ ಮಾಡುತ್ತಾರೆ . 

ಹೋಶಿಯಾರ್ ,  ಜಾಗತೇ ರಹೋ ,   ಜಾಗತೇ ರಹೋ . 


Monday, 19 September 2011

ನಾನು ಮತ್ತು ಪ್ರಕ್ರತಿ


ನಾನು ಮತ್ತು ಪ್ರಕ್ರತಿ 

೧೯೬೪ ನಾನು ೩ನೆ ತರಗತಿಯಲ್ಲಿರುವಾಗ , ಒಂದು ದಿನ ಸಂಜೆ ಸುಮಾರು ೭ ಘಂಟೆಯ ಹೊತ್ತಿಗೆ , ಜೋರಾಗಿ ಮಳೆ ಬಂತು. ಆಗ ನಾನು ಶಿವಮೊಗ್ಗದ ಎಚ್ ಪಿ ಸಿ ಸಿನಿಮಾದ ಬಳಿ ಒಂದು ಮರದ ಕೆಳಗೆ ನಿಂತು ಕೊಂಡಿದ್ದೆ. ಆಗೆಲ್ಲ ಬಸ್ ಸ್ಟಾಪ್ ಇರ್ಲಿಲ್ಲ, ಅಥವಾ ಯಾವುದೇ ದೊಡ್ಡ ಬಿಲ್ಡಿಂಗ್ ಇರ್ಲಿಲ್ಲ. ಹಾಗಾಗಿ ಮಳೆಯಿಂದ ಬಚಾವ್ ಆಗಲಿಕ್ಕೆ ಒಂದೇ ದಾರಿ ಅಂದ್ರೆ ಮರದ ಕೆಳಗೆ ನಿಂತುಕೊಳ್ಳುವುದು. ಆಗಿನ ಕಾಲದಲ್ಲಿ ಶಿವಮೊಗ್ಗದಲ್ಲಿ ಊರು ತುಂಬಾ ಮರಗಳಿದ್ದವು. ಹಾಗಾಗಿ ನಾನು ಕೂಡ ಇತರೆ ಜನರೊಂದಿಗೆ ಮರದ ಕೆಳಗೆ ನಿಂತುಕೊಂಡಿದ್ದೆ. ಆಗ ಬಂದ ಬಿರುಗಾಳಿ ಮಳೆಗೆ ನಾವು ನಿಂತಿದ್ದ ಮರ ಬುಡ ಸಮೇತ ಕಿತ್ತು ಕೊಂಡು ಬಂದು ಧಾರಾಶಾಯಿಯಾಯಿತು. ನಾವೆಲ್ಲಾ ಮರದ ರೆಂಬೆಗಳ ಕೆಳಗೆ ಸಿಕ್ಕಿ ಕೊಂಡೆವು. ಹೇಗೋ ಕಷ್ಟ ಪಟ್ಟು ಹೊರಗೆ ಬಂದೆವು. ಆದರೆ ಭೀಕರ ಮಳೆ. ಏನು ಮಾಡುವುದು. ಮಳೆಯಲ್ಲಿ ನೆನೆಯುತ್ತ ಮನೆ ಕಡೆ ಹೊರಟೆ. ಆಗ ಎಲೆಕ್ಟ್ರಿಸಿಟಿ/ಸ್ಟ್ರೀಟ್ ಲೈಟ್ ಕೂಡ ಇರ್ತ ಇರಲಿಲ್ಲ. ಹಾಗಾಗಿ ಕತ್ತಲೆಯಲ್ಲೇ , ಹೆದರುತ್ತ ಮನೆ ಕಡೆ ಹೊರಟೆ.  ಆದರೆ ದಾರಿಯುದ್ದಕ್ಕೂ ನಾನು ಯೋಚನೆ ಮಾಡ್ತಾ ಇದ್ದೆ , ಏನಂದ್ರೆ, ನಾನು ದೊಡ್ಡವನಾದ ಮೇಲೆ, ನನ್ ಕಯಲ್ಲಿ ದುಡ್ಡು ಆದ ಮೇಲೆ ಶಿವಮೊಗದಲ್ಲಿ ಇರುವಂತಹ ಎಲ್ಲ ಮರಗಳನ್ನು ಕಡಿಸಿ ಹಾಕಿ ಬಿಡ್ತೀನಿ. ಅದರಿಂದ ಜನರಿಗೆ ಉಪಕಾರ ಆಗುತ್ತೆ, ಈ ರೀತಿ ಮರ ಬಿದ್ದು, ಜನರಿಗೆ ತೊಂದರೆ ಆಗುವುದಿಲ್ಲ. ಕೇವಲ ಶಿವಮೊಗ್ಗದ ಮರಗಳ ಬಗ್ಗೆ ಮಾತ್ರ ಯಾಕೆ ಯೋಚಿಸಿದ್ದೆ ಅಂದ್ರೆ ನಮಗೆ ಶಿವಮೊಗ್ಗ ಬಿಟ್ರೆ ಬೇರೆ ಊರಿನ ಬಗ್ಗೆ ಹೆಚ್ಹು ಗೊತ್ತೇ ಇರ್ಲಿಲ್ಲ.  ಈ ಯೋಚನೆ ನನಗೆ ಬಂದಿದ್ದು ಯಾಕೆ ಅಂದ್ರೆ, ಆಗ ನನ್ನಲ್ಲಿ ಪ್ರಜ್ಞಾವಂತಿಕೆ ಇರಲಿಲ್ಲ. ನನ್ನ ಯೋಚನಾ ಶಕ್ತಿ ಸಣ್ಣದಾಗಿತ್ತು. ಆಗ ನನಗೆ ಮರಗಳ ಬಗ್ಗೆ ಏನು ಗೊತ್ತೇ ಇರಲಿಲ್ಲ. ಈ ಪ್ರಪಂಚದ ಉಳಿವಿಗೆ ಮರಗಳ ಸಹಕಾರದ ಬಗ್ಗೆ ಗೊತ್ತೇ ಇರಲಿಲ್ಲ. ಆದ್ರೆ ಈಗ ಯೋಚನಾ ಶಕ್ತಿ ಇದೆ, ಪ್ರಜ್ಞಾವಂತಿಕೆ ಇದೆ, ಆದರೆ, ಈಗ ಆ ಪ್ರಜ್ಞಾವಂತಿಕೆಯಿಂದ ಮನಸ್ಸಿಗೆ ನೋವಾಗುತ್ತಿದೆ. ಯಾಕೆ ಅಂದ್ರೆ, ಈಗ ವಿಶ್ವದಾದ್ಯಂತ ಎಲ್ಲ ಕಡೆ ಕಾಡು/ಗಿಡ/ಮರಗಳನ್ನು ನಾಶ ಪಡಿಸಲಾಗುತಿದೆ, ಆದರೆ ನಮ್ಮಿಂದ ಏನನ್ನೂ ಮಾಡ್ಲಿಕ್ಕೆ ಆಗ್ತಾ ಇಲ್ಲ. 

ಈ ಜಗತ್ತನ್ನು ಸ್ರಷ್ಟಿ ಮಾಡಿದ್ದು ಯಾರು ಅನ್ನುವುದರ ಬಗ್ಗೆ ಬಹಳ ಜಿಜ್ಞಾಸೆ ಇದೆ. ಹಲವು ರೀತಿಯ ವಿಚಾರಗಳಿವೆ. ಕೆಲವರು ಹೇಳುತಾರೆ ವಿಶ್ವದ ಸೃಷ್ಟಿ ಬಿಗ್ ಬಾಂಗ್ನಿಂದಾಗಿ ಆಯಿತು ಅಂತ. ಇನ್ನು ಕೆಲವರು ಹೇಳ್ತಾರೆ, ವಿಶ್ವ ಶೂನ್ಯದಿಂದ ಆಗಿದೆ ಅಂತ. ಇನ್ನು ಕೆಲವರು ಹೇಳ್ತಾರೆ, ಇದು ದೇವರ ಸೃಷ್ಟಿ ಅಂತ. ಆದರೆ ಒಂದಂತು ನಿಜ, ಜಗತ್ತು ಸೃಷ್ಟಿಯಾಗಿದೆ. ಅನೇಕ ರೀತಿಯ ಜೀವ ಜಂತುಗಳು ಇದರಲ್ಲಿ ವಾಸ ಮಾಡಿ ಕೊಂಡಿವೆ.  ಇಲ್ಲಿ ವಾಸ ಮಾಡ್ಲಿಕ್ಕೆ ಎಲ್ಲರಿಗೂ ಹಕ್ಕು ಉಂಟು. ಅದು ಕೂಡ ಸಮಾನ ಹಕ್ಕು. ಮತ್ತೊಂದು ವಿಷಯ ಅಂದ್ರೆ, ಈ ಪ್ರಕ್ರತಿ ಕೂಡ ಎಲ್ಲ ರೀತಿಯ ಜೀವ ಜಂತುಗಳನ್ನು ಒಬ್ಬರಿಗೆ ಒಬ್ಬರು ಅನುಕೂಲವಾಗುವಂತೆ ವ್ಯವಸ್ಥೆ ಮಾಡಿದೆ. 













ಅದಕ್ಕೆ ಆಗಿನೆ ನಮ್ಮವರು ಬಹಳ ಹಿಂದೆ ಶ್ಲೋಕದಲ್ಲಿ ಹೇಳಿದ್ರು, ಅದು ಅಂದ್ರೆ, ಯೋಜಕಸ್ತತ್ರ ದುರ್ಲಭ ಅಂತ. ಈ ಪ್ರಪಂಚದಲ್ಲಿ ಯಾವುದೇ ವಸ್ತು, ಮೂಲಿಕೆಗಳು, ಗಿಡ ಮರಗಳು , ಜೀವ ಜಂತುಗಳು, ಮನುಷ್ಯನನ್ನು ಸೇರಿಸಿ, ಅಪ್ರಯೋಜಕ ಅಂತ ಇಲ್ಲ. ಪ್ರತಿಯೊಂದು ಕೂಡ ಉಪಯೋಗಕ್ಕೆ ಬರುತ್ತದೆ. ಆದರೆ ಅದು ಎಲ್ಲಿ, ಯಾವಾಗ, ಯಾರಿಗೆ ಉಪಯೋಗಕ್ಕೆ ಬರುತ್ತದೆ ಅಂತ ತಿಳಿದವರು ಮಾತ್ರ ಕಡಿಮೆ. ಪ್ರಪಂಚದಲ್ಲಿರುವ   ಇತರೆ ಎಲ್ಲಾ ಜೀವ ಜಂತುಗಳು ಬೇರೆ ಜೀವಿಗಳಿಗೆ ಪೂರಕವಾಗಿ ಬದುಕುತ್ಹವೇ . ಆದರೆ ಮನುಷ್ಯ ಮಾತ್ರ ಪ್ರಪಂಚದಲ್ಲಿ ಇರುವುದೆಲ್ಲ ತನಗಾಗಿ ಮಾತ್ರ ಅಂತ ತಿಳಿದು 
 ಕೊಂಡಿದ್ದಾನೆ. ಆದರೆ ಆ ಸೃಷ್ಟಿ ಕರ್ತ ಮಾತ್ರ ಇಲ್ಲಿ ಎಲ್ಲರಿಗೂ ಅನುಕೂಲವಾಗುವಂತೆ ,            ಒಂದಕ್ಕೆ ಒಂದು ಪೂರಕವಾದ   ಜೀವ    ಜಂತು, ಗಿಡ ಮರಗಳನ್ನು ಸೃಷ್ಟಿಸಿದ. ಇಲ್ಲಿ ಇರುವ ಪ್ರತಿಯೊಂದು ವಸ್ತು, ಜೀವ , ಎಲ್ಲವೂ ಕೂಡ ಜೀವಿಸಲಿಕ್ಕಾಗಿ ಮತ್ತೊಂದು          ಜೀವವನ್ನು ಅವಲಂಬಿಸುತ್ತದೆ. ಪ್ರತಿಯೊಂದು ಜೀವಿಗೂ ಕೂಡ ಜೀವಿಸಲಿಕ್ಕಾಗಿ ಇಂಧನದ ಅವಶ್ಯಕತೆ ಇದೆ, ಅದನ್ನು ನಾವು ಆಹಾರ ಎಂದು ಕರೆಯುತ್ಹೇವೆ. ಹುಲಿಗೆ ಹಸುವು ಆಹಾರವಾದರೆ, ಹಸುವಿಗೆ ಗಿಡ ಮರಗಳು ಆಹಾರ. ಗಿಡ ಮರಗಳಿಗೆ ಗೊಬ್ಬರ ಆಹಾರ . ಮನುಷ್ಯನಿಗೆ ತರಕಾರಿ , ಎಲೆ, ಸೊಪ್ಪು, ಮೀನು, ಇತ್ಯಾದಿಗಳು ಆಹಾರವದರೆ, ಅದೇ ತರಕಾರಿ ಬೆಳೆಯುವ ಗಿಡ, ಬಳ್ಳಿಗಳಿಗೆ ಗೊಬ್ಬರ ಆಹಾರ . 


ಮೀನಿಗೂ ಕೂಡ ಗೊಬ್ಬರವೆ ಆಹಾರ. ಹಾಗಾದರೆ ಈ ಗೊಬ್ಬರ ಎಲ್ಲಿಂದ ಬರುತದೆ. ಮನುಷ್ಯನ ಮಲವೇ ನಿಜವಾಗಿಯೂ ಅತ್ಯುತ್ತಮ ಗೊಬ್ಬರ. ಅದರಷ್ಟು ಉತ್ತಮ ಗೊಬ್ಬರ ಇನೊಂದಿಲ್ಲ. ಹಾಗೆಯೇ, ಸೊಪ್ಪನ್ನು ತಿನ್ನುವ ಪ್ರಾಣಿಗಳ ಮಲವೇ ಮತ್ತೊಂದು ಅತ್ಯುತ್ತಮ ಗೊಬ್ಬರ. ಹೀಗೆ ದೇವರು ಒಬ್ಬರ ತ್ಯಾಜ್ಯವನ್ನು ಮತ್ತೊಬ್ಬರ ಆಹಾರವನ್ನಾಗಿ ಮಾಡಿದ. ಇದೆ ಒಂದು ರೀತಿಯ ಚಕ್ರವಿದ್ದಂತೆ. ಒಬ್ಬರ ಮಲ ಇನ್ನೊಬ್ಬರ ಹಾರವಾದಾಗ, ಸಹಜವಾಗಿಯೇ ಎಲ್ಲಿಯೂ ಆಹಾರ ಅರ್ಥಾತ್ ಇಂಧನದ ಕೊರತೆ ಬರುವುದಿಲ್ಲ. ಆದರೆ ಮನುಷ್ಯ ಮಾತ್ರ ಈ ಜಗತ್ತು ಇರುವುದು ತನಗಾಗಿ ಮಾತ್ರ ಅಂತ ತಿಳ್ಕೊಂಡ್ ಬಿಟ್ಟಿದ್ದಾನೆ. ಇಲ್ಲಿ ಇರುವ ಸರ್ವಸ್ವವೂ ತನಗಾಗಿಯೇ ಇರುವುದೇ ಅಂತ ತಿಳ್ಕೊಂಡ್ ಬಿಟ್ಟಿದ್ದಾನೆ. ತನ್ನ ಭೋಗ ಸಾಧನೆಗಾಗಿ ಇಲ್ಲಿರುವ ಎಲ್ಲವನ್ನು ತನಗೆ ಇಷ್ಟ ಬಂದಂತೆ , ಮನಸೋ ಇಛೆ ಹಾಲುಗೆಡವುತಿದ್ದಾನೆ. ಪ್ರಕ್ರತಿಯ ಅರ್ಥವನ್ನು ತಿಳಿಯದೆ, ಅದರ ಮೂಲ ಉದ್ದೇಶವನ್ನು ತಿಳಿಯದೆ , ಎಲ್ಲವನ್ನು ನಾಶ ಮಾಡುವತ್ತ ತೆರಳುತಿದ್ದಾನೆ. ಇಲ್ಲಿರುವುದೆಲ್ಲ ತನ್ನ ಸುಖಕ್ಕಾಗಿ ಎಂಬ ತಪ್ಪು ಕಲ್ಪನೆಯಿಂದ ಇಡೀ ವಿಶ್ವವನ್ನೇ ವಿನಾಶದ ಅಂಚಿಗೆ ಕೊಂದುಯ್ಯುತಿದ್ದಾನೆ. ಅವನಿಗೆ ಅರಿವೇ ಇಲ್ಲದಂತೆ ಅವನು ತನ್ನ ವಿನಾಶದ ಕಡೆಗೆ ಹೋಗುತ್ಹಿದ್ದಾನೆ. ಇವೆಲ್ಲದಕ್ಕೂ ಕಾರಣ ಹಣದ ಹಾಗು ಐಹಿಕ  ಸುಖದ ಬಗ್ಗೆ ಇರುವ ಅತೀವ ವ್ಯಾಮೋಹ. ಹಾಗಾಗಿ ತನಗೆ ತಿಳಿಯದಂತೆಯೇ ವ್ಯಾಮೋಹಕ್ಕೆ ಒಳಗಾಗುತಿದ್ದಾನೆ. ತನ್ನ ಅಗತ್ಯಕ್ಕಿಂತ ಹೆಚ್ಚಿನ ವಸ್ತುಗಳನ್ನು , ಸೌಕರ್ಯಗಳನ್ನು ತನ್ನದಾಗಿಸಿಕೊಳ್ಳಲು ಹೆಣಗಾದುತ್ತಾನೆ. ಇದೇ ರೀತಿಯ ಒಂದು ಸೌಕರ್ಯ ಎಂದರೆ , ಮನೆಯೊಳಗಿನ ಶೌಚಾಲಯ. 
ನಾನು ಚಿಕ್ಕವನಿದ್ದಾಗ ನಾವೆಲ್ಲಾ ಶೌಚಕ್ಕಾಗಿ ಊರಿನ ಹೊರ ಭಾಗದಲ್ಲಿರುವ "ಹಾಡಿ" ಎಂದು ಕರೆಯಲ್ಪಡುವ ಕಾಡಿಗೆ ಹೋಗುತಿದ್ದೆವು. ಆಗ ನಮ್ಮ ಶೌಚವೆಲ್ಲವು ಗಿಡ ಮರಗಳಿಗೆ ಅಹಾರವಗುತ್ಹಿತ್ತು. ಆಗಿನ ಕಾಲದಲ್ಲಿ ಯಾರ ಮನೆಯಲ್ಲಿಯೂ ಶೌಚಾಲಯ ಎಂಬ ಕಲ್ಪನೆಯೇ ಇರಲಿಲ್ಲ. ಹಾಗಾಗಿ ನಾವು ಪ್ರಕ್ರತಿಯಲ್ಲಿ , ಪ್ರಕ್ರತಿಯ ಸಹಕರಿಗಳಾಗಿ ಬದುಕುತ್ಹಿದ್ದೆವು. ಆಗಿನ ಕಾಲದಲ್ಲಿ ಊರಿನಲ್ಲಿ ಅತಿ ದೊಡ್ಡ ಮನುಷ್ಯ ಯಾರು ಅಂದರೆ, ಯಾರ ಮನೆಯಲ್ಲಿ ಅತಿ ಹೆಚ್ಚು ದನ ಕರುಗಳಿದ್ದವೋ, ಅವರನ್ನೇ ಊರಿನ ಅತಿ ದೊಡ್ಡ ವ್ಯಕ್ತಿ ಎಂದು ಪರಿಗನಿಸಲ್ಪದುತ್ಹಿತ್ತು. ಆಗ ದನದ ಕೊಟ್ಟಿಗೆಯಲ್ಲಿ, ಕಾಡಿನಿಂದ ಸೊಪ್ಪುಗಳನ್ನು ತಂದು ದನಗಳ ಕಾಲಡಿಯಲ್ಲಿ ಹಾಕುತ್ತಿದ್ದರು, ಯಾಕೆ ಅಂದರೆ, ದನ ಹಾಕಿದ ಸೆಗಣಿಯಿಂದ , ಆ ಸೊಪ್ಪು ದನದ ಸೆಗಣಿ, ಮತ್ತು ಗಂಜಲ ದಿಂದ , ಅತ್ಯುತ್ತಮವಾದ ಕಾಮ್ಪೋಸ್ಟ್ ಗೊಬ್ಬರ ತಯಾರಾಗುತ್ತಿತ್ತು. ಆ ರೀತಿಯ ಗೊಬ್ಬರವೂ ಬೆಳೆಗಳಿಗೆ ಉತ್ತಮ ಅಹಾರವಗುತ್ತಿತ್ತು. ಆ ಗೊಬ್ಬರವನ್ನು ಜಮೀನಿನಲ್ಲಿ ತಂದು ಹಾಕಿದಾಗ, ಸಣ್ಣ ಸಣ್ಣ ಹುಳಗಳು ಹಾಗು ಎರೆ ಹುಳಗಳು ಅವನ್ನು ತಿಂದು , ಜಮೀನಿನೊಳಗೆ ತಮ್ಮ ಮಲವನ್ನು ಬಿಡುತ್ತಿದ್ದವು. ಅದು ಅತ್ಯುತ್ತಮ ಫಲವತ್ತಾದ ಮಣ್ಣು. ಅಲ್ಲಿ ಅತ್ಯುತ್ತಮ ಬೆಳೆ, ರೋಗ ರಹಿತ ಬೆಳೆ ಬೆಳೆದು ಬರುತ್ತಿತ್ತು. ಅಂದರೆ ಒಂದು ಮರದ ಸೊಪ್ಪು, ಗಿಡದ ತರಕಾರಿ ಇವೆಲ್ಲವೂ, ಮತ್ತೆ ಮಣ್ಣಾಗಿ , ಗೊಬ್ಬರವಾಗಿ , ನೆಲವನ್ನು ಸೇರಲು, ಎಷ್ಟು ಕಷ್ಟ ನೋಡಿ. ಮೊದಲು ಗಿಡ ಮರಗಳು ಅದೇ ಮಣ್ಣಿನಲ್ಲಿರುವ ಸತ್ವವನ್ನು ತಿಂದು, ಬೆಳೆದು , ತಮ್ಮ ಮಲ, ಎಂದರೆ, ಬೆಳೆದ ಸೊಪ್ಪು, ತರಕಾರಿ ಇತ್ಯಾದಿಗಳನ್ನು, ಮನುಷ್ಯ ಅಥವಾ ಪ್ರಾಣಿಗಳಿಗೆ ಆಹಾರ ಪೂರೈಕೆ 
ಮಾಡುತ್ತದೆ. ಅದನ್ನು ತಿಂದ ಮನುಷ್ಯ ಅಥವಾ ಪ್ರಾಣಿ ತನ್ನ ಉಪಯೋಗವಾದ ಮೇಲೆ, ಉಳಿದ ತ್ಯಾಜ್ಯವನ್ನು ಮಲದ ರೂಪದಲ್ಲಿ ಹೊರಗೆ ಹಾಕುತ್ತದೆ. ಆ ಮಲ ಪುನಃ ಸೊಪ್ಪು, ಎರೆ ಹುಳ, ನೆಲದಲ್ಲಿರುವ ಸಣ್ಣ ಜೀವ ಜಂತುಗಳ ಮುಖಾಂತರ ಪುನಃ ಅತಿ ಉತ್ತಮವಾದ , ಫಲವತ್ತಾದ ಮಣ್ಣಾಗಿ ಪುನಃ ಮರ ಗಿಡಗಳಿಗೆ ಆಹಾರಗುತ್ತದೆ. ಇದು ಒಂದು ರೀತಿಯ ಸೃಷ್ಟಿ ನಿರ್ಮಿಸಿದ ಪೂರ್ಣ ಚಕ್ರ.  ಈ ಚಕ್ರ ಸಸುತ್ರವಾಗಿ ನಡೆಯುತ್ತಿರುವಾಗ ಯಾವುದೇ ರೀತಿಯ ತೊಂದರೆಗಳು ಇರಲಿಲ್ಲ. ಆದರೆ ಮನುಷ್ಯನ ಆಸೆ ಆಕಾಂಕ್ಷೆಗಳು ಇವೆಲ್ಲವನ್ನೂ, ಅಂದರೆ ಈ ಚಕ್ರವನ್ನು ಭೇಧಿಸಲು ಪ್ರಾರಂಭ ಮಾಡಿದೆ. ಮೊಟ್ಟ ಮೊದಲನೆಯದಾಗಿ ನಾವು ಮನೆಯ ಒಳಗೆ ಶೌಚಾಲಯ ನಿರ್ಮಿಸಿ , ಗಿಡ ಮರ, ಬೆಳೆಗಳಿಗೆ ಬೇಕಾಗಿದ್ದ ಆಹಾರವನ್ನು ಅವುಗಳಿಗೆ ಸಿಗದಂತೆ ಮಾಡಿದ್ದೇವೆ. 
ಮನೆಯಲ್ಲಿ ಶೌಚಾಲಯ ಮಾಡಿದ್ದರಲ್ಲಿ ಯಾವುದೇ ತಕರಾರಿಲ್ಲ, ಆದರೆ, ಮನಿಯಲ್ಲಿ ಇರುವ ಮಲವನ್ನು ಅದರ ನಿಜವಾದ ವಾರಸುದಾರರಿಗೆ ತಲುಪಿಸುವ , ಅದರ ನಿಜವಾದ ಹಕ್ಕುದಾರರಿಗೆ ಸಿಗುವಂತೆ ಮಾಡುವ ಕಾರ್ಯವನ್ನು ಮಾತ್ರ ಮನುಷ್ಯ ಮಾಡಲೇ ಇಲ್ಲ. ಇದರಿಂದಾಗಿ ದೇವ ನಿರ್ಮಿತ ಪ್ರಕ್ರತಿಯ ಸಹಜವಾದ ಆಹಾರ ಚಕ್ರವನ್ನು ಮನುಷ್ಯ ತನ್ನ ಸೌಕರ್ಯಕ್ಕಾಗಿ ತುಂಡು ಮಾಡಿ ಬಿಟ್ಟ. ಈಗ ಮರ ಗಿಡ, ಬೆಳೆಗಳಿಗೆ ಆಹಾರ ಇಲ್ಲ. ಅದು ಮಾತ್ರ ಅಲ್ಲ, ಇದನ್ನೇ ನಂಬಿ ಕೊಂಡು, ಬದುಕಿ ಕೊಂಡಿದ್ದ ಯೆರೆ ಹುಳ , ಇತರೆ ಕ್ರಿಮಿ ಕೀಟ ಗಳ ಆಹಾರವನ್ನು ಕೂಡ ಮನುಷ್ಯ ನಾಶ ಮಾಡಿಬಿಟ್ಟ.  ಇಷ್ತಾಗಿದ್ದರೆ ಪರವಾಗಿರಲಿಲ್ಲ. ಈಗ ಮನುಷ್ಯನ ಆಹಾರಕ್ಕೂ ಕೂಡ ಕುತ್ತು ಬಂತು, ಯಾಕೆಂದರೆ, ತನ್ನ ಆಹಾರ ವನ್ನು ಕಳೆದು ಕೊಂಡಿದ್ದರಿಂದ  ಬೆಳೆಗಳು ಬೆಳೆಯುವುದನ್ನು ನಿಲ್ಲಿಸಿದವು. ಹಸುಗಳು ಹಾಲನ್ನು ಕೊಡುವುದು ನಿಲ್ಲಿಸಿದವು. ಇಲ್ಲಿ ಮನುಷ್ಯ ತನ್ನ ತಪ್ಪನ್ನು ತಿದ್ದಿ ಕೊಳ್ಳುವುದರ ಬದಲು, ಪ್ರಕ್ರತಿಯ ವಿರುಧವೆ ಸೆಡ್ಡು ಹೊಡೆದು ನಿಂತ. ಅದರ ಪರಿಣಾಮವೇ, ಕೆಮಿಕೆಲ್ ಗೊಬ್ಬರ, ಕೆಮಿಕೆಲ್ ಹಾಲು, ಎಲ್ಲವೂ ಕೆಮಿಕಾಲ್ಮಯ.  ಎಲ್ಲಿಯತನಕ ಎಂದರೆ, ನಾವೆಲ್ಲ ಹೆಮ್ಮೆಯಿಂದ ಕುಡಿಯುವ ಕೋಲ, ಪೆಪ್ಸಿ ಇತ್ಯಾದಿಗಳಿಗೆ ಪ್ರಮುಖವಾಗಿ ಬೇಕಾಗಿರುವುದೇ ಕೆಫಿನ್ ಎಂಬ ಒಂದು ಪ್ರಕ್ರತಿಕ ಪ್ರಚೋದಕ. ಆದರೆ ನಿಜವಾದ  ಕೆಫಿನ್ ಸಿಗದೇ ಇರುವುದರಿಂದ ಯುರಿಯ ದಿಂದ ಕೆಮಿಕೆಲ್ ಕೆಫಿನ್ ಅನ್ನು ತಯಾರಿಸಲಾಗುತ್ತಿದೆ. ಇವತ್ತು, ಎಲ್ಲ ರೀತಿಯ ಪೆಯಗಳಲ್ಲಿ ಹಾಕುವುದು ಕೆಮಿಕೆಲ್ ಕೆಫಿನ್. ಅದನ್ನೇ ನಾವು ಕುಡಿಯುತ್ತೇವೆ.  ಎಲ್ಲವೂ ಕೆಮಿಕೆಲ್ ಮಾಯಾ ಆಗುತ್ತಿದೆ. 
ಇದಕ್ಕೆಲ್ಲ ಕಾರಣ ಮನುಷ್ಯನ ಅತಿಯಾದ ಆಸೆ, ಆಕಾಂಕ್ಷೆಗಳು. ಕ್ರತ್ರಿಮ ಸುಖದ ಬಗ್ಗೆ ಇರುವ ಅತಿಯಾದ ಮೋಹ. 

ಮನುಷ್ಯ ಈ ಪ್ರಕ್ರತಿಯ ಚಕ್ರವನ್ನು ಕೂಡಲೇ ಸರಿಪದಿಸದಿದ್ದಲ್ಲಿ, ಖಂಡಿತವಾಗಿಯೂ ವಿಶ್ವವು ವಿನಾಶದಂಚಿಗೆ ಹೋಗುವುದರಲ್ಲಿ ಯಾವುದೇ ಸಂಶಯ ವಿಲ್ಲ. 

ಪ್ರಕತಿಯನ್ನು ಗೌರವಿಸಿ, ಬೆಳೆಸಿ, ಉಳಿಸಿ, ಅದರ ಪಾಡಿಗೆ ಅದನ್ನ್ನು ಅದರ ಕೆಲಸಗಳನ್ನು ಮಾಡಲು ಬಿಡಿ. ಅದರ ಕೆಲಸವನ್ನು ಹಾಳುಗೆದವಬೇಡಿ. ಅದರಿಂದ ನಮಗೆ ನಷ್ಟ. ಈಗಲಾದರೂ ಸರಕಾರವು ಎಚ್ಹೆತ್ತು ಕೊಂಡು ಈ ಪ್ರಕ್ರತಿಯ ಆಹಾರ ಚಕ್ರವನ್ನು ಪುನಃ ಜೋಡಿಸಲು ಪ್ರಯತ್ನ ಮಾಡಲಿ.