Sunday, 10 May 2015

ನಂದು ಒಂದು ಭ್ರಮೆ -- ಇನ್ನು ಹೇಳ್ಬೇಕು ಅಂದ್ರೆ ಹುಚ್ಚು - ಹೆಚ್ಚಿದ ಹುಚ್ಚು

ನಂದು ಒಂದು ಭ್ರಮೆ -- ಇನ್ನು ಹೇಳ್ಬೇಕು ಅಂದ್ರೆ ಹುಚ್ಚು - ಹೆಚ್ಚಿದ ಹುಚ್ಚು
ಈಗೀಗ ನನಗೆ ಅನ್ನಿಸ್ತಾ ಇರೋದು ಅಂದ್ರೆ , ಮನುಷ್ಯ ಅಂದ್ರೆ ಏನು , ಜೀವ ಅಂದ್ರೆ ಏನು, ಪ್ರಾಣ ಅಂದ್ರೆ ಏನು, ಸಾಯೋದು ಅಂದ್ರೆ ಏನು, ನಾವು ಏಕೆ ಸಾಯ್ತೀವಿ,  ಸತ್ತ ಮೇಲೆ ಎಲ್ಲಿಗೆ ಹೋಗ್ತೀವಿ, ನಮ್ಮ ಜೀವ ಅಥವ ಆತ್ಮಕ್ಕೆ ಎನ್ನಾಗುತ್ತೆ, ಆತ್ಮ ಅಂದ್ರೆ ಏನು , ಮಳೆ ಹೇಗ್ ಬರುತ್ತೆ , ಮೋಡ ಹೇಗ್ ತಯಾರಾಗುತ್ತೆ, ಗುಡುಗು ಮಿಂಚು ಅಂದ್ರೆ ಏನು, ಇತ್ಯಾದಿ ಇತ್ಯಾದಿ.  ಅದನ್ನು ಕೂಡ ಯೋಚನೆ ಮಾಡ್ತಾ ಹೊದಾಗೆ ನಂಗೆ ವಿಚಿತ್ರವಾದ ವಿಚಾರಗಳು ತಲೆಯಲ್ಲಿ ಬರಲಿಕ್ಕೆ ಸುರು ಆಯ್ತು.





ಮನುಷ್ಯ ಅಂದ್ರೆ ಏನು ?  ಇದು ಒಂಥರಾ ಹಾರ್ಡ್ ವೇರ್ , ಆದ್ರೆ ಕಂಪ್ಯೂಟರ್ ಥರ ಅಲ್ಲ, ಯಾಕೆ ಅಂದ್ರೆ ಕಂಪ್ಯೂಟರ್ ಕೊಳೆಯೋದಿಲ್ಲ ,  ಆದ್ರೆ ಮನುಷ್ಯನ ಶರೀರ ಜೀವ ಇಲ್ಲ ಅಂದ್ರೆ ಕೊಳೆತು ಹೋಗಿ ಬಿಡುತ್ತೆ . ಆದ್ರೆ ಎರಡರಲ್ಲೂ ಸಾಮ್ಯತೆ ಅಂದ್ರೆ, ಎರಡಕ್ಕೂ ಜೀವ ಕೊಡ್ಬೇಕು . ಕಂಪ್ಯೂಟರ್ ಗೆ , ವಿದ್ಯುತ್ ಶಕ್ತಿ ಬೇಕಾದರೆ, ಮನುಷ್ಯನಿಗೆ ಜೀವ ಅಥವಾ ಆತ್ಮ ಬೇಕು . ಆದ್ರೆ ಈ ಆತ್ಮ ಅಥವಾ ಜೀವ ಎಲ್ಲಿಂದ ಬರುತ್ತೆ. ಇದಕ್ಕೆ ಉತ್ತರೆ ಅಂದ್ರೆ, ಮತ್ತೆ ಅದೇ ಬ್ಲಾಕ್ ಹೋಲ್ ಅಥವಾ ಸ್ವರ್ಗ . ನಮಗೆಲ್ಲ ತಿಳಿದ ಹಾಗೆ, ಬ್ರಹ್ಮ ಶ್ರಷ್ಟಿ ಕರ್ತ . ಎಲ್ಲ ಜೀವಿಗಳಿಗೂ ಜೀವನವನ್ನು ಕೊಡುವವನು ಅವನೆ. ಅಂದ್ರೆ ಆತ ಜೀವಿಗಳನ್ನು ಶ್ರಷ್ಟಿ ಮಾಡುವಂತಹ ಶಕ್ತಿಯುಳ್ಳ ಮಹಾ ವಿಜ್ಞಾನಿ. ಹಾಗಾದರೆ ಈ ಆತ್ಮಗಳನ್ನು ಆತ ಶ್ರಷ್ಟಿ ಮಾಡಿ ಭೂಮಿಗೆ ಹೇಗೆ ಕಳಿಸ್ತಾನೆ? ಈ ಆತ್ಮಗಳು ಮನುಷ್ಯನ ಶರೀರದಲ್ಲಿ ಹೇಗೆ ಸೇರಿ ಕೊಳ್ಳುತ್ತೆ?


ನನಗೆ ಅನ್ನಿಸೋದು ಏನು ಅಂದ್ರೆ, ನಾವು ಇದುವರೆಗೆ ಗ್ರಹಿಸದೆ ಇರುವಂಥಹ ಒಂದು ವೈಜ್ಞಾನಿಕ ಸತ್ಯ ಇದರಲ್ಲಿ ಅಡಗಿದೆ . ಈ ಆತ್ಮ , ಜೀವ , ಇವನ್ನೆಲ್ಲ ಅರಿಯುವ ಮೊದಲು, ನಾವು ಸೃಷ್ಟಿ ಯನ್ನು ತಿಳಿದು ಕೊಳ್ಳ ಬೆಕಾಗುತ್ತದೆ. ಹಾಗಾಗಿ ಈಗ ನಾವು ಮಳೆ ಹೇಗೆ ಬರುತ್ತೆ ಅಂತ ಸ್ವಲ್ಪ ನೋಡೋಣ . ಈಗಿನ ವಿಜ್ಞಾನಿಗಳ ಪ್ರಕಾರ , ಸಮುದ್ರದ ನೀರು ಸೆಕೆ ಗಾಲದಲ್ಲಿ  ಆವಿಯಾಗಿ , ಮೋಡವಾಗಿ ಪರಿವರ್ತನೆ ಗೊಂಡು , ಮಳೆಯಾಗಿ ಸುರಿಯುತ್ತದೆ ಎಂದು . ಆದ್ರೆ ನನ್ನ ಪ್ರಶ್ನೆ ಎಂದರೆ, ಅದು ಮೋಡವಾಗಿ ಪರಿವರ್ತನೆ ಯಾವಾಗ ಆಗುತ್ತದೆ, ಮತ್ತು ಅದು ಯಾಕೆ ಸರಿಯಾಗಿ ಕೆರಳದಿಂದಲೇ, ಕರಾರುವಕ್ಕಾದ ದಿನದಂದೇ ಹೇಗೆ ಬರುತ್ತದೆ, ಒಂದೇ ದಾರಿಯಲ್ಲಿ ಹೇಗೆ ಸಾಗುತ್ತದೆ ,ಈ ರೀತಿಯ ಅನೇಕ ಪ್ರಶ್ನೆಗಳು ಉದ್ಭವಿಸುತ್ತವೆ. ಇತ್ತೀಚಿನ ದಿನಗಳಲ್ಲಿ ಮಳೆ ಬಹಳ ಕಡಿಮೆ ಆಗಿದೆ , ಕಾರಣ ಕೇಳಿದರೆ ELNINO ಪ್ರಭಾವ ಅಂತ ಹೇಳ್ತಾರೆ . ಇಲ್ಲಿ ನಂದೊಂದು ಪ್ರಶ್ನೆ, ವಿಜ್ಞಾನಿಗಳ ಪ್ರಕಾರ ಇತ್ತೀಚಿನ ದಿನಗಳಲ್ಲಿ, ಭೂಮಿಯ ತಾಪ ಮಾನ ಹೆಚ್ಹು ಅಗ್ತಾ ಇದೆ ಹಾಗು ಸೂರ್ಯನ ಶಾಖ ಹೆಚ್ಚಾಗಿ ಭೂಮಿ ಹೆಚ್ಹು ಹೆಚ್ಹು ಬಿಸಿ ಆಗುತ್ತಾ ಇದೆ . ಹೀಗೆ  ಭೂಮಿ ಹೆಚ್ಹು ಬಿಸಿ ಆದಾಗ ಸಮುದ್ರದಲ್ಲಿನ ನೀರು ಹೆಚ್ಹು ಹೆಚ್ಹು ಆವಿಯಾಗಿ , ಮೋಡವಾಗಿ ಮೇಲೆ ಹೋಗ ಬೇಕು . ನಂತರ ಅದರ ಫಲವಾಗಿ ಹೆಚ್ಹು ಹೆಚ್ಹು ಮಳೆ ಆಗ ಬೇಕು . ಆದರೆ ಹಾಗೆ ಆಗ್ತಾ ಇಲ್ಲ , ದಿನದಿಂದ ದಿನಕ್ಕೆ, ವರ್ಷದಿಂದ ವರ್ಷಕ್ಕೆ ಮಳೆ ಕಡಿಮೆ ಆಗ್ತಾ ಇದೆ. ಇಲ್ಲಿ ವಿಜ್ಞಾನಿಗಳ ಹೇಳಿಕೆ , ನಂಬಿಕೆ ತಪ್ಪು ಅಂತ ಅನಿಸ್ತಾ ಇದೆ ಏಕೆ ಅಂದ್ರೆ, ಅಥವಾ ಭೂಮಿ ಬಿಸಿ ಹೆಚ್ಹು ಅಗ್ತಾ ಇಲ್ಲ, ಹೆಚ್ಹು ಆಗಿದ್ದಿದ್ರೆ ಸಮುದ್ರದ ನೀರು ಹೆಚ್ಹು ಹೆಚ್ಹು ಬಿಸಿಗೆ ಹೆಚ್ಹು ಹೆಚ್ಹು ಆವಿಯಾಗಿ , ಹೆಚ್ಹು ಹೆಚ್ಹು ಮೋಡಗಳು ತಯಾರಾಗಿ ಹೆಚ್ಹು ಹೆಚ್ಹು ಮಳೆ ಆಗ ಬೇಕಿತ್ತು . ಆದ್ರೆ ಹಾಗೆ ಅಗ್ತಾ ಇಲ್ಲ . ಇಲ್ಲವೋ ಹೆಚ್ಹು ಮೋಡಗಳು ತಯಾರ್ ಅಗ್ತಾ ಇಲ್ಲ, ಇಲ್ಲ ಅಂದ್ರೆ, ತಯಾರ್ ಆದ ಮೋಡಗಳು ಭೂಮಿಯಿಂದ ಆಚೆಗೆ ಹೋಗ್ತಾ ಇರ ಬೇಕು .. ಆದ್ರೆ ಇವೆರಡು ತಪ್ಪು. ಮೋಡಗಳು ಹೆಚ್ಹು ತಯಾರ್ ಅಗ್ತಾನು ಇಲ್ಲ ಅಥವಾ ಅವು ತಯಾರ್ ಆಗಿ ಭೂಮಿಯಿಂದ ಆಚೆ ಹೋಗ್ತಾನು ಇಲ್ಲ. . ಅದೇ ರೀತಿ   ಗುಡುಗಿನ ಬಗ್ಗೆ ಮತ್ತು ಮಿಂಚಿನ ಬಗ್ಗೆ, ಕೇಳಿದಾಗೆ, ಎರಡು ಮೋಡಗಳು ಡಿಕ್ಕಿ ಹೊಡೆದಾಗ, ಗುಡುಗು ಮಿಂಚು ಹುಟ್ಟುತ್ತದೆ ಎಂದು ಹೇಳ್ತಾರೆ , ಹಾಗಾದ್ರೆ, ಮೋಡಗಳು ಗಟ್ಟಿಯಾಗಿ ಕಲ್ಲಿನಂತೆ ಇರ್ಬೆಕಲ್ಲ. ಆದ್ರೆ, ವಿಮಾನದಲ್ಲಿ ಹೋಗೋವಾಗ, ಮೋಡದ ಮಧ್ಯೆ ಹೋಗುತ್ತೇವೆ, ಆದ್ರೆ ಅಲ್ಲಿ ಎಲ್ಲೂ  ಕೂಡ ನನಗೆ ಗಟ್ಟಿಯಾದ, ಕಲ್ಲಿನಂತಹ ಮೋಡಗಳು ಕಾಣಿಸಲೇ ಇಲ್ಲ. ಆಲಿ ಕಲ್ಲು ಯಾಕೆ ಬೀಳುತ್ತೆ, ಅದು ಹೇಗೆ ತಯಾರಾಗುತ್ತೆ , ಇದೊಂದು ನನಗೆ ಅರ್ಥಾ ಅಗ್ತಾ ಇರ್ಲಿಲ್ಲ.  ಇದರ ಬಗ್ಗೆ ಯೋಚನೆ ಮಾಡ್ತಾ ಕುತಾಗ ನನಗೆ ಅನ್ಸಿದ್ದು ಏನು ಅಂದ್ರೆ, ಮಳೆ , ಮೋಡ, ಇವ್ಯಾವುದು ಕೂಡ ನಾವು ಅಂದು ಕೊಂಡಂತೆ , ಸಮುದ್ರದ ನೀರು ಬಿಸಿಗೆ ಆವಿಯಾಗಿ , ಮೋಡವಾಗಿ , ಮಳೆ ಆಗುವುದು ಅಲ್ಲ.  ನಮ್ಮ ಪುರಾಣವನ್ನು , ಸರಿಯಾಗಿ ವಿಶ್ಲೇಷಿಸಿದರೆ ತಿಳಿಯುತ್ತದೆ , ಇವೆಲ್ಲವನ್ನು ಕೂಡ ಆ ದೇವರೇ, ಅಂದ್ರೆ, ವಾಯು ದೇವ ಮತ್ತು ವರುಣ ದೇವತೆಗಳು , ಅಥವಾ ಆ ಹೆಸರಿನ ವಿಜ್ಞಾನಿಗಳು, ಆ ಸ್ವರ್ಗದಲ್ಲಿ ಕುಳಿತು ಕಳಿಸ್ತಾ ಇರಬಹುದು ಎಂದು . , ಹಾಗೆ ಕಳಿಸ್ತಾ ಇದ್ರೆ ಹೇಗೆ ಕಳಿಸ್ತಾ ಇದ್ದಾರೆ .  ಇತ್ತೀಚಿನ ದಿನಗಳಲ್ಲಿ ಮಳೆ ಯಾಕೆ ಕಡಿಮೆ ಆಗ್ತಾ ಇದೆ?  ನಮ್ಮ ವಿಜ್ಞಾನಿಗಳ ಪ್ರಕಾರ ಸಮುದ್ರದ ನೀರು ಬಿಸಿಲಿಗೆ ಆವಿಯಾಗುವುದಾಗಿದ್ದರೆ, ಈಗಿನ ಬಿಸಿಲಿಗೆ ಹೆಚ್ಹಿನ ನೀರು ಆವಿಯಾಗಿ, ಹೆಚ್ಚಿನ ಮಳೆ ಬರಬೇಕಾಗಿತ್ತು , ಆದ್ರೆ, ಅದಕ್ಕೆ ವಿರುದ್ಧವಾಗಿ ಮಳೆ ಕಡಿಮೆ ಆಗ್ತಾ ಇದೆ . ಮಳೆ ಕೂಡ  ಯಾವ್ದ್ಯಾವ್ದೋ ಸಮಯದಲ್ಲಿ ಎಲ್ಲೆಲ್ಲೋ ಬಂದು ಬಿಡುತ್ತೆ .  ಅದೇ ರೀತಿ, ಈಗಿನ ವಿಜ್ಞಾನಿಗಳ ಮಾತನ್ನು ನಂಬುವುದಾದರೆ, ಬಿಸಿಲಿಗೆ ಆವಿಯಾದ ಹಾಗು ನಂತರ ಮೋಡವಾಗಿ ಪರಿವರ್ತನೆ ಗೊಂಡ , ಮೋಡಗಳು, ಕರಾರುವಕ್ಕಾಗಿ , ನಿಶ್ಚಿತ ದಿನದಂದು ಕೇರಳದಲ್ಲೇ ಯಾಕೆ ಪ್ರವೇಶ ಮಾಡಬೇಕು , ವರ್ಷಪೂರ್ತಿ ಬೇರೆ ಬೇರೆ ಕಡೆಗಳಿಂದ ಪ್ರವೇಶ ಮಾಡ ಬಹುದಲ್ಲವೇ . ಈ ರೀತಿ ಆವಿಯಾದ ಸಮುದ್ರದ ನೀರು, ವರ್ಷ ಪೂರ್ತಿ ಯಾಕೆ ಮೋಡವಾಗಿ ಪರಿವರ್ತನೆ ಗೊಳ್ಳುವುದಿಲ್ಲ , ಬದಲಾಗಿ , ಕೇವಲ ಮಳೆಗಾಲದಲ್ಲಿಯ ಯಾಕೆ ಮೋಡ ಆಗುತ್ತದೆ .  ಹಾಗೆ ಯಾಕೆ ಆಗ್ತಾ ಇದೆ? ಇತ್ತೀಚಿನ ಜಮ್ಮು ಕಾಶೀರದಲ್ಲಿ ಬಂದಂತಹ ಪ್ರಳಯ ಸದ್ರುಪಿ ಮಳೆ ಗಮನಿಸಿದರೆ, ಅದು ಎಲ್ಲಿಂದ ಬಂತು . ಮೋಡ ಸೀದಾ ಸಮುದ್ರದ ಮೇಲಿನಿಂದ , ಬೇರೆಲ್ಲೂ ಸುರಿಯದೆ, ಸೀದಾ ಜಮ್ಮು ಕಾಶ್ಮೀರಕ್ಕೆ ಯಾಕೆ ಹೋಯ್ತು? ಇದಕ್ಕೆಲ್ಲ ಉತ್ರಾನೆ ಸಿಗೊದಿಲ್ಲ. ಸಮುದ್ರದ ನೀರು ಬಿಸಿಯಾಗಿ ಮೋಡವಾಗಿ , ಮಳೆಯಾಗಿ ಬರಬಹುದು, ಆದರೆ, ಮಳೆಗಾಲದ ಮಳೆಯಷ್ಟು ಪ್ರಮಾಣದಲ್ಲಿ ಖಂಡಿತವಾಗಿ ಅದು ಸಾಧ್ಯವಿಲ್ಲ . ಅದು ಅಲ್ಪ ಪ್ರಮಾಣದಲ್ಲಿ, ಅಕಾಲಿಕವಾಗಿ , ಮಳೆಗಾಲ ಬಿಟ್ಟು, ಬೇರೆ ಸಮಯದಲ್ಲಿ ಬರುವ ಮಳೆ , ಅದರಿಂದ ಆಗಿರಬಹುದು. ಇತ್ತೀಚಿಗೆ ಅಕಾಲಿಕ ಮಳೆಗಳು ಅದರಿಂದಾಗಿ ಬರಬಹುದು . ಆದರೆ ಮಳೆಗಾಲದಲ್ಲಿ ಬರುವ ಮಳೆ ಖಂಡಿತವಾಗಿಯೂ , ಸಮುದ್ರದ ನೀರು ಆವಿಯಾಗಿ , ಮೋಡವಾಗಿ, ಬರುವ ಮಳೆ ಅಲ್ಲ . ಅದು ಖಂಡಿತವಾಗಿ ಮಹಾನ್ ತಾಂತ್ರಿಕ , ಯಾಂತ್ರಿಕ, ವಿಜ್ಞಾನಿ ಆಗಿರುವ , ನಾವು ದೇವರು ಎಂದು ಕರೆಯುವ , ವಾಯು, ವರುಣ ಮತ್ತು ಅಗ್ನಿ ದೇವರುಗಳ ಸಂಯುಕ್ತ ಕ್ರಿಯೆ . ಅದನ್ನೇ ನಾನು ಹೇಗೆ ಎಂದು ಮುಂದೆ ವಿವರಿಸಲು ಪ್ರಯತ್ನಿಸುತ್ತೇನೆ . ನಾನು ಯಾವುದನ್ನು ಹೊಸದಾಗಿ ಹೇಳುವುದಿಲ್ಲ , ಎಲ್ಲವೂ ನಮ್ಮ ಪುರಾಣದಲ್ಲಿ ಇರುವುದನ್ನೇ ವಿಶ್ಲೇಷಣೆ ಮಾಡಿ ತಿಳಿಸುವ ಪ್ರಯತ್ನ ಮಾಡುತ್ತಿದ್ದೇನೆ .

ಇಲ್ಲಿ ನಾವು ಮೊಟ್ಟ ಮೊದಲನೆಯದಾಗಿ ಅರ್ಥ ಮಾಡಿ ಕೊಳ್ಳ ಬೇಕಾಗಿರುವುದು, ನಮ್ಮ ಪುರಾಣ ಹಾಗು ಕಥೆಗಳಲ್ಲಿ ಬರುವ ಪಾತ್ರಗಳನ್ನು , ಕೇವಲ ಕಥೆಯ ಪಾತ್ರಗಳನ್ನಾಗಿ ನೋಡದೆ, ಬೃಹತ್ ಪಾಂಡಿತ್ಯವುಳ್ಳ ವಿಜ್ನಾನಿಗಳಾಗಿ ನೋಡ ಬೇಕು . ಹಾಗಾಗಿ ನನಗೆ ಅನ್ಸೋದು ಅಂದ್ರೆ, ಇದ್ಯಾವ್ದು ಕೂಡ ನಾವೇ ಅಂದ್ಕೊಂಡ ಹಾಗೆ, ಸಮುದ್ರದ ನೀರು ಬಿಸಿಯಾಗಿ, ಮೋಡವಾಗಿ, ಮಳೆ ಬರುವುದು ಅಲ್ಲ, ಅದರ ಬದಲಾಗಿ, ಆ ವಾಯು ಮತ್ತು ವರುಣ ಸೇರಿ ಸ್ವರ್ಗ ಅಥವಾ ಬ್ಲಾಕ್ ಹೋಲ್ ನಿಂದ ಕಳಿಸುತ್ತಾರೆ . ಈಗ ಪ್ರಶ್ನೆ  ಬರುವುದು ಹೇಗೆ ಕಳಿಸ್ತಾರೆ ಅಂತ . ಇತ್ತೀಚಿಗೆ ಪತ್ರಿಕೆಯಲ್ಲಿ ಒಂದು ಸುದ್ದಿ ಬಂದಿತ್ತು, ಅದು ಅಂದ್ರೆ , ನಮ್ಮ ಭೂಮಿಯಿಂದ ಆಚೆಗೂ ಕೂಡ, ಮೋಡಗಳು ಇರುವುದನ್ನು ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ ಎಂದು . ಅದ್ರ ಅರ್ಥ, ಮೋಡ ಕೇವಲ ಭೂಮಿಯ ಮೇಲೆ ಮಾತ್ರ ಅಲ್ಲ ಭೂಮಿಯಿಂದ ಆಚೆ ಕೂಡ ಇದೆ ಎಂದು . ಆದ್ರಿಂದ ನನಗೆ ಅನ್ಸೋದು ಅಂದ್ರೆ,  ನಾನು ಮೊದಲೇ ಹೇಳಿದಂತೆ , ಕೋಟ್ಯಾಂತರ ಸೌರ ಮಂಡಲಗಳು , ಬ್ಲಾಕ್ ಹೋಲ್ ನಿಂದ ಹೊರಬಂದು ಒಂದು ಪಥದಲ್ಲಿ ,  ಒಂದರ ಹಿಂದೆ ಒಂದರಂತೆ ಸಾಗುತ್ತ, ಕೊನೆಗೆ ಪುನಹ ಬ್ಲಾಕ್ ಹೋಲಿನೊಳಗೆ ಹೋಗಿ ಸೇರುತ್ತದೆ . ಈ ರೀತಿ ಸಾಗುವ ಪಥದ ಪಕ್ಕದಲ್ಲೇ ಇನ್ನೊಂದು ಪಥವಿರುತ್ತದೆ, ಅದನ್ನು ಮೋಡವನ್ನು ಕಳಿಸಲು  ಉಪಯೋಗಿಸಲಾಗುತ್ತದೆ .







ನನ್ನ ಈ ವಾದಕ್ಕೆ, ಪುಷ್ಟಿಯೇನ್ನುವಂತೆ , ಈ ಮೇಲೆ ನಾನು ಒಂದು ಪತ್ರಿಕೆಯಲ್ಲಿ ಬಂದಂತಹ ಒಂದು ವರದಿಯನ್ನು ಹಾಕಿದ್ದೇನೆ
ಈ ವರದಿಯ ಪ್ರಕಾರ , ನಮ್ಮ ಸೌರ ಮಂಡಲ ಕಕ್ಷೆಯ ಹೊರಗೆ ಒಂದು ಸುರಂಗ ರೀತಿಯ ದಾರಿ ಇದೆ, ಮತ್ತು ಈ ದಾರಿ ಪ್ರಯಾಣಿಸಲು ಸಾಧ್ಯವಾದುದಾಗಿದೆ . ಇದರ ಅರ್ಥ, ಆ ಸುರಂಗ ಮಾರ್ಗ , ಯಾವುದನ್ನು ಈ ವಿಜ್ಞಾನಿಗಳು ಹೇಳುತ್ತಿದ್ದಾರೆ, ಅದುವೇ, ನಮ್ಮೆ ವಾಯು, ವರುಣ ಮತ್ತು ಅಗ್ನಿ, ದೇವರುಗಳು, ಮೋಡ , ಮಿಂಚು, ಗಾಳಿಯನ್ನು ಭೂಮಿಗೆ ಕಳಿಸಲು ಉಪಯೋಗಿಸುವ ರಹ ದಾರಿ ಅಥವಾ ಸುರಂಗ  ಅಥವಾ ಕಕ್ಷೆ.  ಇಲ್ಲಿ ಮೋಡವು ಯಾವುದೋ ಅನಿಲ ರೂಪದಲ್ಲಿ ಇರಬಹುದು. ಬ್ಲಾಕ್ ಹೋಲ್ ನಿಂದ ಮೋಡ ಹೊರಟಾಗ, ಅದಕ್ಕೆ ಆ ಸುರಂಗ ದಲ್ಲಿ ಚಲಿಸಲು ಒಂದು ಇಂಧನ ಅಥವಾ ಶಕ್ತಿ ಬೇಕಾಗುತ್ತದೆ . ಆ ಶಕ್ತಿಯನ್ನು ವಾಯುದೆವನು ಗಾಳಿಯ ರೂಪದಲ್ಲಿ ನೀಡುತ್ತಾನೆ . ಗಾಳಿಯು ಆ ಸುರಂಗದಲ್ಲಿ ಪ್ರಯಾಣ ಪ್ರಾರಂಭಿಸಿರುವ ಮೋಡಗಳನ್ನು ಜೋರಾದ ಗಾಳಿಯೊಂದಿಗೆ ತೆಗೆದುಕೊಂಡು ಹೋಗುತ್ತಾನೆ . ಈಗ ಪ್ರಶ್ನೆ ಬರುವುದು ಅಗ್ನಿ ದೇವತೆಗೆ ಏನು ಕೆಲಸ ಎಂದು . ಈ ಮೋಡ ಮತ್ತು ಗಾಳಿ ತಮ್ಮ ಪ್ರಯಾಣ ಪ್ರಾರಂಭಿಸಿದಾಗ , ದಾರಿಯಲ್ಲಿ, ಅವುಗಳು ತಮ್ಮ ಪಥವನ್ನು ತಪ್ಪದಿರಲು, ಅವುಗಳಿಗೆ ಒಂದು ಗೋಡೆಯಂತೆ ರಕ್ಷಣೆ ಕೊಡುತ್ತ, ಒಂದೇ ಮಾರ್ಗದಲ್ಲೇ ಚಲಿಸುವಂತೆ  BARRICADE ತಯಾರು ಮಾಡಿ ಕೊಡುವುದೇ ಅಗ್ನಿ ದೇವನ ಕೆಲಸ . ಅಗ್ನಿ ದೇವಾನು ಬಹುಷಃ , ELECTRIC MAGNET FIELD ತಯಾರು ಮಾಡಿ , ಈ ಸುರಂಗದ ಹೊರ ವಲಯದಲ್ಲಿ, ಬೇಲಿಯ ರೂಪದಲ್ಲಿ , ಈ ಮೋಡ ಮತ್ತು ಗಾಳಿಯನ್ನು ಒಂದೇ ಪಥದಲ್ಲಿ ಚಲಿಸಲು ಸಹಾಯ ಮಾಡುತ್ತಿರ ಬಹುದು . ಈ ರೀತಿಯ ಸುರಂಗ ಅಥವಾ ಕಕ್ಷೆ ಸೌರ ಮಂಡಲ ಕಕ್ಷೆಯ ಹೊರ ಭಾಗದಲ್ಲಿ , ಸೌರ ಮಂಡಲ ಕಕ್ಷೆಯ ಜೊತೆ ಜೊತೆಯಲ್ಲೇ ಹೊಗುತ್ತಿರುತ್ತದೆ.
ಈ ಕಕ್ಷೆಯಲ್ಲಿ, ಮೋಡವನ್ನು, ಬ್ಲಾಕ್ ಹೊಲಿನಿಂದ ಕಲಿಸಲಾಗುತ್ತದೆ. ಅದನ್ನು ಚಲಿಸುವಂತೆ ಮಾಡಲು ಗಾಳಿಯ ಜೊತೆಗೆ ಅದನ್ನು ಕಳಿ ಸಲಾಗುತ್ತದೆ, ಮತ್ತು ನಿರಂತರ ಚಲನೆಯಲ್ಲಿ ಇರಲಿಕ್ಕಾಗಿ , ಅದರ ಜೊತೆ ವಾಹಕ ಗಳನ್ನೂ ಸೇರಿಸಿ ಕಳಿಸಲಾಗುತ್ತದೆ . ಆ ವಾಹಕವೇ ವಿದ್ಯುತ್ ಶಕ್ತಿ. ಈ ರೀತಿ ಕಳಿಸಿದ ಮೋಡಗಳು ಗಾಳಿ ಮತ್ತು ವಿದ್ಯುತ್ತಿನ ಸಹಾಯದೊಂದಿಗೆ ತನ್ನ ಪಥದಲ್ಲಿ , ಬ್ಲಾಕ್ ಹೋಲ್  ನಿಂದ ಪ್ರಾರಂಭಿಸಿ , ಕೊನೆಗೆ ಬ್ಲಾಕ್ ಹೊಲಿನೊಳಗೆ ಕೊನೆಗೊಳ್ಳುತ್ತದೆ .  ನಮ್ಮ ಸೌರ ಮಂಡಲದಲ್ಲಿರುವ, ಭೂ ಮಂಡಲವು , ಸೂರ್ಯನನ್ನು ಸುತ್ತು ಹೊಡೆಯುವಾಗ , ಈ ಹೊರಗಿನ ಮೋಡಗಳ ಕಕ್ಷೆಯನ್ನು ಪ್ರವೇಶಿಸುತ್ತದೆ . ಈ ಪ್ರವೇಶವು ಪ್ರತಿ ವರ್ಷವೂ, ನಿಖರವಾದ  ತಿಂಗಳಿನಲ್ಲಿ , ಮತ್ತು ನಿಖರವಾದ ದಿನದಲ್ಲಿ ನಡೆಯುತ್ತದೆ . ಹಾಗಾಗಿಯೇ ನಮ್ಮ MANSOON  ಯಾವಾಗಲು, ಒಂದೇ ಸಮಯದಲ್ಲಿ ಒಂದೇ ಜಾಗದಲ್ಲಿ ಪ್ರವೇಶ ಮಾಡುವುದು .. ಆಗ ಅಲ್ಲಿರುವ ಮೋಡವು ಭೂಮಂಡಲದ ಕಕ್ಷೆಯನ್ನು ಪ್ರವೇಶಿಸುತ್ತದೆ, ಹಾಗೆ ಪ್ರವೇಶಿಸುವಾಗ, ಅದನ್ನು ಭೂ ಮಂಡಳ ದೊಳಗೆ ಪ್ರವೇಶಿಸುವಂತೆ ಮಾಡಲು, ಗಾಳಿ ಮತ್ತು ವಿದ್ಯುತ್ ಸಹಾಯ ಮಾಡುತ್ತದೆ , ಹಾಗಾಗಿಯೇ, ಮಳೆಗಾಲದ ಪ್ರಾರಂಭದಲ್ಲಿ ಆ ಹೊರಗಿನ ಕಕ್ಷೆಯನ್ನು ಭೂಮಿ ಪ್ರವೇಶಿಸುವಾಗ, ELECTRIC MAGNET ಬೇಲಿಯನ್ನು ದಾಟಿ ಕಕ್ಷೆಯನ್ನು ಪ್ರವೇಶಿಸ ಬೇಕಾಗುತ್ತದೆ ,  ಮತ್ತು ಹಾಗೆ ಪ್ರವೇಶಿಸಿದಾಗಎಲೆಕ್ಟ್ರಿಕ್ ಮ್ಯಾಗ್ನೆಟಿಕ್ ಫೀಲ್ಡ್ ಅನ್ನು  ಮತ್ತು ಗಾಳಿಯ ಪಥವನ್ನು ಎದುರಿಸಿದಾಗ , ಮೋಡದೊಂದಿಗೆ , ಬಿರುಸಾದ ಗಾಳಿ, ಗುಡುಗು ಮಿಂಚು ಕೂಡ ಭೂಮಿಯ ವಲಯವನ್ನು ಪ್ರವೇಶ ಮಾಡುತ್ತದೆ . ಇದರಿಂದಾಗಿಯೇ ಗುಡುಗು, ಮಿಂಚು, ಗಾಳಿ  ಕೇವಲ, ಮಳೆಗಾಲದ ಪ್ರಾರಂಭದಲ್ಲಿ ಮತ್ತು ಕೊನೆಯಲ್ಲಿ ಕಾಣ ಸಿಗುತ್ತದೆ ,  ಒಮ್ಮೆ ಭೂಮಿ ಹೊರಗಿನ ಮೋಡಗಳ ಕಕ್ಷೆಯನ್ನು ಪೂರ್ಣವಾಗಿ  ಪ್ರವೇಶಿಸಿದಾಗ , ELECTRIC MAGNET  ಬೇಲಿಯನ್ನು ದಾಟಿದ ನಂತರ, ಗಾಳಿ , ಸಿಡಿಲು ನಿಂತು ಹೋಗುತ್ತದೆ ಮತ್ತು ಆ ಕಕ್ಷೆಯ ಒಳಗೆ ಇರುವ ತನಕ ಗುಡುಗು, ಸಿಡಿಲು, ಮಿಂಚು, ಗಾಳಿ ಯಾವುದು ಇರುವುದಿಲ್ಲ . ಭೂ ಮಂಡಲವು ಆ ಮೋಡಗಳ ಕಕ್ಷೆಯಲ್ಲಿ ಇರುವ ತನಕ ಮಳೆಗಾಲ ವಾಗಿರುತ್ತದೆ. ಬೂ ಮಂಡಲ ಆ ಕಕ್ಷೆಯನ್ನು ಬಿಟ್ಟು ಮತ್ತೆ ಮುಂದೆ ಹೊದಾಗ ಮಳೆಗಾಲ ಮುಗಿಯುತ್ತದೆ. ಆ ಕಕ್ಷೆಯನ್ನು ಬಿಟ್ಟು ಹೊರಬರುವಾಗ , ಮತ್ತೆ ಗಾಳಿ, ಮತ್ತು ELECTRIC MAGNET ಬೇಲಿಯನ್ನು ದಾಟಿ ಹೊರಗೆ ಬರಬೇಕಾಗುತ್ತದೆ . ಆಗ ಪುನಃ ಗುಡುಗು , ಸಿಡಿಲು, ಮಿಂಚು ಮುಂತಾದುವು ಕಾಣ ಸಿಗುತ್ತದೆ . ಅವೆಲ್ಲ ಉಂಟಾಗುವುದು ಭೂಮಿ ಆ ಕಕ್ಷೆಯನ್ನು ಪ್ರವೇಶಿಸುವಾಗ ಮತ್ತು ಹೊರಗೆ ಬರುವಾಗ, ಆಗುವ ಘರ್ಷಣೆ ಯಿಂದಾಗಿ .











ಈ ಮೇಲ್ಕಂಡ ಚಿತ್ರ ನೋಡಿದಾಗ ತಿಳಿಯುವುದೇನೆಂದರೆ ಭೂ ಮಂಡಲವು ಹೊರಗಿನ ಕಕ್ಷೆ ಅಥವಾ, ಮಳೆ ಮತ್ತು ಗಾಳಿಯ ಕಕ್ಷೆಯೊಳಗೆ ಪ್ರವೇಶಿಸಿದಾಗ  ಮಳೆಗಾಲ ಪ್ರಾರಂಭವಾಗುತ್ತದೆ . ವರುಣ ದೇವತೆ ಮೋಡಗಳನ್ನು ಅದರ ಕಕ್ಷೆಯೊಳಗೆ ಬಿಟ್ಟಾಗ, ವಾಯು ದೇವತೆ ಅತಿ ವೇಗದ ಗಾಳಿ ಮತ್ತು ವಿದ್ಯುತ್ ಶಕ್ತಿಯೊಂದಿಗೆ ಅದನ್ನು ಅದರ ಕಕ್ಷೆಯೊಳಗೆ ತಳ್ಳುತ್ತಾನೆ . ಈ ರೀತಿ ಮೋಡ ತನ್ನ ಕಕ್ಷೆಯಲ್ಲಿ ಚಲಿಸುತ್ತ ಇರುತ್ತದೆ . ಬ್ಲಾಕ್ ಹೋಲ್ ನಿಂದ ಹೊರಬಂದ ಪ್ರತಿಯೊಂದು ಸೌರ ಮಂಡಲವು ತನ್ನದೇ ಆದ ಕಕ್ಷೆಯಲ್ಲಿ  ಚಲಿಸುತ್ತಿರುತ್ತದೆ . ಪ್ರತಿಯೊಂದು ಸೌರ ಮಂಡಲದಲ್ಲಿರುವ ಭೂ ಮಂಡಲವು  ಸೂರ್ಯನನ್ನು ಸುತ್ತು ಹಾಕುವಾಗ , ಈ ಹೊರಗಿನ ಮೋಡಗಳ ಕಕ್ಷೆಯನ್ನು ದಾಟುತ್ತದೆ . ಹಾಗೆ ದಾಟುವಾಗ ಅಲ್ಲಿರುವ ಮೋಡಗಳು, ಭೂ ಮಂಡಲವನ್ನು ಪ್ರವೇಶಿಸಿ ಮಳೆಯನ್ನು ಸುರಿಸುತ್ತದೆ . ಹೀಗಾಗಿ, ಬ್ಲಾಕ್ ಹೊಲಿನ  ಸಮೀಪದಲ್ಲಿರುವ ಸೌರ ಮಂಡಲಗಳು ಹೆಚ್ಚಿನ ಮಳೆಯನ್ನು ಪಡೆಯುತ್ತವೆ . ಬ್ಲಾಕ್ ಹೊಲ ನಿಂದ, ದೂರ ಹೋದಂತೆ, ಮೋಡದ ಪ್ರಮಾಣ, ಶಕ್ತಿ ಎಲ್ಲವೂ ಕಡಿಮೆ ಆಗುತ್ತಾ ಹೋಗುತ್ತದೆ , ಹೀಗಾಗಿ, ಸತ್ಯಯುಗ, ತ್ರೇತ ಯುಗ , ದ್ವಾಪರ ಯುಗ ಗಳಲ್ಲಿ, ಮಳೆ ತುಂಬಾ ಚೆನ್ನಾಗಿ ಆಗುತ್ತಿರುತ್ತದೆ . ಆದರೆ, ಕಲಿಯುಗ, ಕೊನೆಯ ಯುಗ, ಮತ್ತು ತನ್ನ ಪ್ರಯಾಣ ಮುಗಿಸಿ ಪುನಃ ಬ್ಲಾಕ್ ಹೋಲ್ ನೊಳಗೆ, ಹೋಗಲು ತಯಾರಾಗಿರುವ , ಮತ್ತು ಬ್ಲಾಕ್ ಹೋಲಿಗೆ ಸಮೀಪವಾಗಿರುವ ಸೌರ ಮಂಡಲ, ಹೀಗಾಗಿ, ಇಲ್ಲಿ ಮಳೆ ಕಡಿಮೆ . ವರುಣ ಕಳಿಸಿದ ಮೋಡದ ಪ್ರಮಾಣ ಬಹಳ ಕಡಿಮೆ ಉಳಿದಿರುತ್ತದೆ , ಹೀಗಾಗಿಯೇ ಈಗ  ಮಳೆಯ ಪ್ರಮಾಣ ಕಡಿಮೆಯಾಗಿರುತ್ತದೆ . ಇದ್ಯಾವುದು ಕೂಡ , ಎಲ್ನಿನೋ ಅಥವಾ ಇನ್ಯಾವುದೋ ಕಾರಣಗಳಲ್ಲ. ವರುಣ ದೇವರು ಕಳಿಸಿದ ಮೋಡಗಳಿಂದ ಬರುವ ಮಳೆಯಲ್ಲಿ ಯಾವುದೋ ಅವ್ಯಕ್ತ ಗುಣಗಳು ಮತ್ತು ಶಕ್ತಿ ಇರುತ್ತದೆ. ಯಾಕೆ ಅಂದರೆ, ನಾವು ಗಿಡ ಮರಗಳಿಗೆ ಎಷ್ಟೇ ರೀತಿಯ, ನಿರಂತರ ನೀರನ್ನು ಹಾಕಿದರು ಸಹ , ಆ ಗಿಡ ಮರಗಳು ತುಂಬಾ ಲವ ಲವಿಕೆಯಿಂದ ಮೇಲೆ ಬರುವುದಿಲ್ಲ. ಭೂಮಿಯ ತುಂಬಾ ಹಸಿರು ತುಂಬಿ ಕೊಳ್ಳುವುದಿಲ್ಲ . .  ಆದರೆ ಮಳೆ ಬಂದ ತಕ್ಷಣ ಎಲ್ಲೆಲ್ಲಿಂದಲೋ , ಯಾವ್ಯಾವುದೋ ಗಿಡ ಗುಂಟೆಗಳು , ಭೂಮಿಯ ತುಂಬಾ ಜೀವ ತುಂಬಿಕೊಂಡು, ಲವ ಲವಿಕೆಯೊಂದಿಗೆ ಮೇಲೆ ಬಂದು ಬಿಡುತ್ತವೆ . ನೆಲದಲ್ಲಿ ಎಲ್ಲೆಲ್ಲೊ ಅಡಗಿ ಕೊಂಡಿದ್ದ ಯಾವ್ಯಾವುದೋ ಸಣ್ಣ ಸಣ್ಣ ಜೀವಿಗಳು ಜೀವ ತಳೆದುಕೊಂಡು ಮೇಲೆ ಬರುತ್ತವೆ . ಮಳೆ ನೀರನ್ನು ಹಿಡಿದು ಹಾಗೆಯೇ ಒಂದು ಕಡೆ ಸಂಗ್ರಹಿಸಿ ಇಟ್ಟಲ್ಲಿ, ಅದರಲ್ಲಿ , ಬೇರೆ ಬೇರೆ ರೀತಿಯ ಜೀವಿಗಳು ಹುಟ್ಟಿಕೊಳ್ಳುತ್ತವೆ . ಇದರ ಅರ್ಥ, ಮಳೆಯ ನೀರಲ್ಲಿ , ದೇವರು, ಆ ನೀರಿನೊಂದಿಗೆ ವಿವಿಧ ರೀತಿಯ ಜೀವಾಣುಗಳನ್ನು ಕೂಡ ಕಳಿಸುತ್ತಾನೆ . ಬೇರೆ ಬೇರೆ ರೀತಿಯ ಜೀವಾಣುಗಳನ್ನು ಸ್ವರ್ಗದಿಂದ ಭೂಮಿಗೆ ಕಳಿಸಲು ಕೂಡ ಇದೆ ಮಾರ್ಗವಾಗಿರುತ್ತದೆ .. ಇದರ ಅರ್ಥ, ದೇವರು ಕಳಿಸಿದ ಆ ಮೋಡಗಳಲ್ಲಿ ಯಾವುದೊ ಒಂದು ಅವ್ಯಕ್ತ ಶಕ್ತಿ ಇದೆ. ನಿಮಗೆ ಅನ್ನಿಸ ಬಹುದು, ಹಾಗಾದರೆ ಆವಿಯಾದ ನೀರು ಎಲ್ಲಿ ಹೋಗುತ್ತದೆ ಎಂದು ? ಹಾಗೆ ಆವಿಯಾದ ನೀರಿನ ಪ್ರಮಾಣ ತುಂಬಾ ಕಡಿಮೆ ಇರುತ್ತದೆ. ಅದುವೇ , ಆಕಸ್ಮಿಕವಾಗಿ ಎಲ್ಲೆಲ್ಲೊ ಸುರಿದು , ಅನಾಹುತಗಳನ್ನು, ಸೃಷ್ಟಿಸುವ ಮೋಡಗಳು ಆಗಿರುತ್ತವೆ . ಈ ರೀತಿಯ ಮೋಡಗಳು ಯಾವಾಗ ಬೇಕೆಂದರೆ ಅವಾಗ , ಎಲ್ಲಿ ಬೇಕೆಂದರೆ ಅಲ್ಲಿ ಸುರಿಯುತ್ತದೆ. ಉದಾಹರಣೆಗೆ ಉತ್ತರಾಂಚಲದ ಕೇದಾರನಾಥ ದಲ್ಲಿ ಸುರಿದ ಮಳೆ . ಆ ಮಳೆಗೆ ಯಾವುದೇ ರೀತಿಯ ಶಿಸ್ತು , ಸಮಯ, ನಿಯಮ ಏನು ಇರುವುದಿಲ್ಲ . ಯಾವಾಗ ಬೇಕೆಂದರೆ ಅವಾಗ, ಎಲ್ಲಿ ಬೇಕೆಂದರೆ ಅಲ್ಲಿ ಹೋಗಿ ಸುರಿದು ಅನಾಹುತಗಳನ್ನು ಮಾದಿಬಿದುತ್ತದೆ. ಆದರೆ ಅದು ನಿರಂತರವಾಗಿ ಇರುವುದಿಲ್ಲ. ಅದೇ, ದೇವರು ಕಳಿಸಿದ ಮೋಡ, ಮಳೆಗೆ ಒಂದು ರೀತಿಯ ಶಿಸ್ತು , ನಿಯಮಗಳು ಇರುತ್ತವೆ . ನಾವು ಸ್ವಲ್ಪ ಹಿಂದೆ ಹೋಗಿ ನೋಡಿದರೆ, ಅಥವಾ, ಹಿರಿಯರನ್ನು ಕೇಳಿದರೆ, ತಿಳಿಯುತ್ತದೆ, ಸುಮಾರು ೫೦ ವರ್ಷಗಳ ಹಿಂದೆ, ಮಳೆ ಆರು ತಿಂಗಳು ನಿರಂತರವಾಗಿ ಸುರಿಯುತ್ತಿತ್ತು . ನನಗೆ ಈಗಲೂ ಚೆನ್ನಾಗಿ ನೆನಪಿದೆ, ನಮ್ಮ ಊರು ಹೆಬ್ರಿ ಯಲ್ಲಿ, ನಾವು ಚಿಕ್ಕವರಿದ್ದಾಗ ಆರು ತಿಂಗಳಗಳ ಕಾಲ ನಿರಂತರವಾಗಿ ಮಳೆ ಸುರಿಯುತ್ತಿತ್ತು . ಸಣ್ಣ ಸಣ್ಣ ಹಳ್ಳ ಕೊಳ್ಳಗಳು , ಕೆರೆಗಳು , ನದಿಗಳು , ತುಂಬಿ ಉಕ್ಕಿ ಹರಿಯುತ್ತಿತ್ತು . ಆದರೆ ಈಗ, ವರ್ಷದಲ್ಲಿ ಸರಿಯಾಗಿ ಎರಡು ತಿಂಗಳು ಕೂಡ ಮಳೆ ಬರುವುದಿಲ್ಲ . ಹಳ್ಳ ಕೊಳ್ಳಗಳು ನೋಡಲು ಕೂಡ ಸಿಗುವುದಿಲ್ಲ .  ಇದೆ ರೀತಿ ಹಿಂದೆ, ಮಳೆಗಾಲದಲ್ಲಿ, ಬಿರುಗಾಳಿ, ಗುಡುಗು , ಸಿಡಿಲು , ಮಿಂಚು , ಇತ್ಯಾದಿಗಳು , ಬಹಳ ಭೀಕರವಾಗಿ ಕಾಣಸಿಗುತ್ತಿತ್ತು . ಆದರೆ ಈಗ , ಬಿರುಗಾಳಿ, ಎಲ್ಲೊ ಒಂದು ಕಡೆ, ಅಚಾನಕ್ ಆಗಿ ಕಾಣಿಸಿಕೊಂಡು , ತಾಂಡವ ಆಡುತ್ತದೆ . ಗುಡುಗು , ಮಿಂಚು ಗಳನ್ನು , ಹುಡುಕ ಬೇಕಾಗುತ್ತದೆ . ಇದೆಲ್ಲದರ ಅರ್ಥ ಎಂದರೆ, ಬ್ಲಾಕ್ ಹೊಲ ಅಥವಾ ಸ್ವರ್ಗದಲ್ಲಿ , ಕುಳಿತು , ಆ ವಾಯು ದೇವ , ಅಗ್ನಿ ದೇವ , ವರುಣ ದೇವ , ಕಳಿಸುತ್ತಿರುವ ,  ಮೋಡ, ಗಾಳಿ, ವಿದ್ಯುತ್ , ಇತ್ಯಾದಿ, ಕ್ಷೀಣ ಗೊಂಡು , ಈಗ ಅಲ್ಪ ಸ್ವಲ್ಪ , ಅಳಿದುಳಿದ , ಮೋಡ , ಬಿರುಗಾಳಿ, ಮಿಂಚು ಇತ್ಯಾದಿಗಳು ಭೂಮಿಯ ಮೇಲೆ ಬೀಳುತ್ತಿದೆ .
ಈಗ ನಾವು ಏನೆ ಪ್ರಯತ್ನ ಪಟ್ಟರು , ಮಳೆಯನ್ನು  ಹೆಚಿಸಲು ಆಗುವುದಿಲ್ಲ . ಕ್ರಮೇಣ ಮಳೆಯ ಪ್ರಮಾಣ ಕಡಿಮೆ ಆಗುತ್ತಾ ಹೋಗುತ್ತದೆ . ಈ ಭೂಮಿಯ ಮೇಲಿನ ಜನ , ಜಾನುವಾರುಗಳು , ಗಿಡ ಮರಗಳು, ನೀರಿಗಾಗೆ ಹಾತೊರೆಯ ಬೇಕಾಗುತ್ತದೆ . ಈಗ ನಮ್ಮಲ್ಲಿ ಉಳಿದಿರುವ ಒಂದೇ ದಾರಿಯೆಂದರೆ, ಇರುವ ನೀರನ್ನು ಹೇಗೆ , ಮಿತವಾಗಿ, ಪ್ರಯೋಜನಕಾರಿಯಾಗಿ , ಉಪಯೋಗಿಸಿಕೊಂಡು ಹೋಗುವುದು ಎಂದು ಯೋಜನೆ ಮಾಡುವುದು . ಮಳೆಯ ಪ್ರಮಾಣವನ್ನು ಹೆಚಿಸಲು ಖಂಡಿತವಾಗಿ ಸಾಧ್ಯವಿಲ್ಲ , ಹಾಗಾಗಿ ಇರುವ ನೀರನ್ನೇ ಹೆಚ್ಹಿನ ಪ್ರಯೋಜನ ಕಾರಿಯಾಗಿ ಬಳಸುವುದು ಹೇಗೆ ಎಂದು ಈಗಿನಿಂದಲೇ ಯೋಚಿಸಲು ಸುರುಮಾದ ಬೇಕು . ಇಲ್ಲವಾದಲ್ಲಿ, ನಮ್ಮ ಮುಂದಿನ ಜನ್ಮದಲ್ಲಿ , ನೀರಿಗಾಗಿ ಹೋರಾಟ ಮಾಡ ಬೇಕಾಗುತ್ತದೆ .
ನನ್ನ ಮುಂದಿನ ಸಂಚಿಕೆಯಲ್ಲಿ ಈ ಆತ್ಮ, ಮರುಜನ್ಮ ಇವುಗಳ ಬಗ್ಗೆ ತಿಳಿಸಲು ಪ್ರಯತ್ನ ಮಾಡುತ್ತೇನೆ .

Saturday, 16 August 2014

ನಂದು ಒಂದು ==ಭ್ರಮೆ = ಇನ್ನು ಹೇಳ್ಬೇಕು ಅಂದ್ರೆ ಹುಚ್ಚು

ನಿಜ ಹೇಳ್ಬೇಕು ಅಂದ್ರೆ ನನ್ಗೆ ಭಾಳಾ ದಿವ್ಸದಿಂದ  ಯಾಕೋ ಒಂಥರಾ ಅನಿಸ್ತಿತ್ತು . ಈ ಪ್ರಪಂಚ ಅಂದ್ರೆ ಏನು, ಭೂಮಿ ಅಂದ್ರೆ ಏನು, ಆಕಾಶ ಅಂದ್ರೆ ಏನು, ದೇವ್ರು ಅಂದ್ರೆ ಏನು, ಸ್ವರ್ಗ ಅಂದ್ರೆ ಏನು, ಹುಟ್ಟು ಅಂದ್ರೆ ಏನು, ಸಾವು ಅಂದ್ರೆ ಏನು, ಸತ್ತ ಮೇಲೆ ಎಲ್ಲಿಗೆ ಹೋಗ್ತೀವಿ, ಈಥರ ನೂರಾರು ಯೋಚನೆಗಳು ತಲೆ ಒಳ್ಗೆ ಬಂದು , ಒಂಥರಾ ಹುಚ್ ಹಿಡ್ದಂಗ್ ಆಗ್ತಾ ಇತ್ತು. ಆವಾಗೆಲ್ಲ ಕುತ್ಕೊಂಡು ಸುಮ್ನೆ ಯೋಚನೆ ಮಾಡ್ತಾ ಇರ್ತಿದ್ದೆ. ಹೀಗೆ ನನ್ನ ತಲೆ ಒಳಗೆ ಬಂದಿದ್ದನ್ನೆಲ್ಲ ಬರೀತಾ ಹೋಗ್ತಾ ಇದ್ದೀನಿ .

ಈ ಭೂಮಿ ಹೇಗೆ ಹುಟ್ಟಿರಬಹುದು . ಮೇಲೆ ಕಾಣಿಸಿದಂತೆ ಹುಟ್ಟಿರಬಹುದೆ . ಅಥವಾ ಈ ಕೆಳಗಿನಂತೆ ಆಗಿರಬಹುದೇ?
                                                                   

ಇಲ್ಲ ಅಂದ್ರೆ ಹೀಗೆ ಆಗಿರ ಬಹುದೇ?

ಯಾಕೋ ಇದ್ಯಾವ್ದು ಸರಿ ಕಾಣಿಸ್ತಾ ಇಲ್ಲ. 
ನಮ್ಮ ಪುರಾಣಗಳನ್ನು ಓದ್ತಾ ಇದ್ದಾಗ ನಂಗೆ ನಮ್ಮ ದಶಾವತಾರಗಳ ಬಗ್ಗೆ ಕುತೂಹಲ ಮೂಡ್ತು . 
ಮೊದಲ್ನೇ ಅವತಾರ - ಮತ್ಸ್ಯವತಾರ 
Lord Matsya 
ಎರಡನೆ ಅವತಾರ - ಕುರ್ಮಾವತಾರ 
Lord Kurma 
 ಮೂರನೆ ಅವತಾರ - ವರಾಹವತಾರ 
Lord Varaha 
ನಾಲ್ಕನೇ ಅವತಾರ  - ನರಸಿಂಹಾವತಾರ 
Lord Narasimha
ಐದನೇ ಅವತಾರ  - ವಾಮನವತಾರ 
Vamana 
ಆರನೇ ಅವತಾರ - ಪರಶುರಾಮಾವತರ 
 Parashurama 
 ಏಳನೇ ಅವತಾರ - ರಾಮಾವತಾರ 

Lord Rama 
ಎಂಟನೆ ಅವತಾರ - ಕೃಷ್ಣಾವತಾರ 
Lord Krishna 
ಒಂಬತ್ತನೇ ಅವತಾರ - ಬೌದ್ಹಾವತಾರ 
ಹತ್ತನೇ ಅವತಾರ - ಕಲ್ಕಿ ಅವತಾರ 
Kalki 
ಈ ಅವತಾರಗಳನ್ನೆಲ್ಲಾ ನೋಡ್ತಾ ಹೋದ ಹಾಗೆ, ಅವುಗಳ ಬಗ್ಗೆ ಓದ್ತಾ ಹೋದ ಹಾಗೆ, ಮನಸ್ಸಿನಲ್ಲಿ ಎಲ್ಲೊ ಒಂದ್ ಕಡೆ, ನಾವೆಲ್ಲಾ ಇವುಗಳನ್ನು ಅರ್ಥ ಮಾಡ್ಕೊಳೋ ದರಲ್ಲಿ , ಏನೋ ಒಂದು ತಪ್ಪು ಮಾಡ್ತಾ ಇದ್ದೀವೇನೋ ಅಂತಾ ಅನಿಸ್ತಾ ಇದೆ. ನಿಜಕ್ಕೂ ನೋಡಿದ್ರೆ ಇವುಗಳು ನಮಗೆ ಏನನ್ನೋ ವೈಜ್ಞಾನಿಕವಾಗಿ ಹೇಳ್ತಾ ಇದ್ದವೇನೋ ಅಂತ ಅನಿಸ್ತಾ ಇದೆ. ನಮ್ಮಲ್ಲಿ ಅವುಗಳನ್ನು ಅರ್ಥ ಮಾಡಿಕೊಳ್ಳೋ ಶಕ್ತಿ ಇಲ್ಲವೇನೋ ಅಂತ ಅನ್ನಿಸ್ತಾ ಇದೆ. ಈ ದೇವರುಗಳು ಅಥವಾ ಈ ದಶಾವತಾರಗಳು ಬಹುಷಃ ನಮ್ಮನ್ನು ಶೃಷ್ಟಿ ಮಾಡಿರುವಂತಹ ಅತಿ ಶಕ್ತಿಯುತವಾದ ಯಾವುದೋ ಒಂದು ಜೀವಿಗಳು ಆಗಿರ ಬಹುದು. ಅವರೆಲ್ಲ ನಮಗಿಂತ ಬಹಳ ಶಕ್ತಿಯುತರಾಗಿ , ಬುಧಿವಂತರಾಗಿ , ಮೆಧಾವಿಗಳಾಗಿ , ಇರಬಹುದು.  ಈ ಸೌರ ಮಂಡಳ  ಅವರುಗಳ ನಿರ್ಮಾಣವಾಗಿರಬಹುದು . ನಾವೇನಾದರೂ ಈ ರೀತಿಯ  ದೃಷ್ಟಿಕೋನ ದಲ್ಲಿ, ನಮ್ಮ ಪುರಾಣಗಳನ್ನು ನೋಡ್ತಾ ಹೋದ್ರೆ , ನಂಗನ್ಸುತ್ತೆ , ನಮಗೆ ಏನಾದ್ರು ಹೊಸ್ತು ಕಂಡು ಬರ ಬಹುದು. 
ಇನ್ಯಾಕೆ ಸುಮ್ನೆ ತಡ ಮಾಡೋದು , ನನ್ನ ತಲೆಯಲ್ಲಿ ಆ ದೇವ್ರು ಏನೇನು ತುಂಬ್ತಾ ಇದ್ದಾನೋ, ಅದನ್ನೆಲ್ಲ ಇಲ್ಲಿ ನಿಮ್ಮ ಮುಂದೆ ಇಟ್ಟು ಬಿಡ್ತೀನಿ .
ನಾವೆಲ್ಲ ಬ್ಲಾಕ್ ಹೋಲ್ , ಅಂತಾ ಕೇಳ್ತಾ ಇರ್ತೀವಿ . ಅದು ಎಲ್ಲವನ್ನು ನುಂಗಿ ಬಿಡುತ್ತೆ , ತನ್ನ ಹತ್ರ ಬಂದ ಎಲ್ಲವನ್ನು ಸ್ವಾಹ ಮಾಡಿ ಬಿಡುತ್ತೆ ಅಂತಾ ನಾವುಗಳು ಓದ್ತಾ ಇರ್ತೀವಿ . ಇತ್ತೀಚಿಗೆ ವಿಜ್ಞಾನಿಗಳು ಹೇಳ್ತಾ ಇದ್ದಾರೆ, ಇಲ್ಲೇ ಹತ್ರಾ ಎಲ್ಲೊ ಒಂದು ಹೊಸ ಬ್ಲಾಕ್ ಹೋಲ್ ಹುಟ್ಟಿ ಕೊಳ್ತಾ ಇದೆ ಅಂತಾ . ಆದ್ರೆ ಆ ರೀತಿ ಯಾವದೇ ಹೊಸ ಬ್ಲಾಕ್ ಹೋಲ್ ಹುಟ್ಟಿ ಕೊಳ್ತಾ ಇಲ್ಲ, ಅದು ಇದ್ದಲ್ಲೇ ಇದೆ. ನಾವು ಮಾತ್ರ ತಿರುಗ್ತಾ ತಿರುಗ್ತಾ ಅದರ ಹತ್ತಿರಕ್ಕೆ ಹೋಗ್ತಾ ಇದ್ದೆವೆ. ಶ್ರೀಕೃಷ್ಣ ಭಗವದ್ಗೇತಿಯಲ್ಲಿ ಇದನ್ನೇ ಅರ್ಜುನನಿಗೆ ಹೇಳಿದ್ದು . ಅಂತಿಮವಾಗಿ ನಾನು ಎಲ್ಲವನ್ನು ಸ್ವಾಹಾ ಮಾಡುತ್ತೇನೆ , ಸ್ವತಹ ನಿನ್ನನ್ನು , ನನ್ನನ್ನು ಸಹಾ ನಾನು ಸ್ವಾಹಾ ಮಾಡುತ್ತೇನೆ  ಎಂದು ಹೇಳುತ್ತಾನೆ . ಅದರ ಅರ್ಥಾ ಕೊನೆಯಲ್ಲಿ, ಎಲ್ಲವನ್ನು ಸ್ವಾಹಾ ಮಾಡಲ್ಪಡುತ್ತದೆ , ಆದರೆ ಇಲ್ಲಿ ಪ್ರಶ್ನೆ ಬರುವುದು, ಯಾರು ಅಥವಾ ಯಾವುದು ಎಲ್ಲವನ್ನು ಸ್ವಾಹಾ ಮಾಡುತ್ತದೆ ಎಂದು . ಈ ಪ್ರಶ್ನೆಗೆ ಉತ್ತರವೇ " ಬ್ಲಾಕ್ ಹೋಲ್" . ಈಗ ನನ್ನ ಕಲ್ಪನೆಯ ಸೃಷ್ಟಿಯನ್ನು ನಿಮ್ಮ ಮುಂದೆ ಇಡಲು ಪ್ರಯತ್ನ ಮಾದುತ್ತೆನೆ. 

ಮೇಲುಗಡೆ ಕಾಣುತ್ತಿರುವಂತ ಗೋಲ ನಾವೇನು ಮಿಲ್ಕಿ ವೆ ಅಥವಾ ಆಕಾಶ ಗಂಗೆ ಅಥವಾ ಆಕಾಶ ಕಾಯ ಅಂತ ಕರೀತೀವಿ ಅದು. ಕಪ್ಪು ಬಣ್ಣದಲ್ಲಿ ಕಾಣ್ತಾ  ಇರೋದು ಬ್ಲಾಕ್ ಹೋಲ್ . ನನ್ನ ಮನಸ್ನಲ್ಲಿ ಬರ್ತಾ ಇರೋದು ಅಂದ್ರೆ, ಶ್ರೀ ಕೃಷ್ಣ ಹೇಳಿದಂತಹ ಎಲ್ಲವನ್ನು ಸ್ವಾಹಾ ಮಾಡುವಂತಹ ಆ ವಸ್ತುವೇ ಈ ಬ್ಲಾಕ್ ಹೋಲ್  ಮತ್ತು ನಾವೆಲ್ಲಾ ಪೂಜಿಸ್ತಾ ಇರುವಂತಹ ದೇವರು ಅಥವಾ ಆ ಮಹಾ ಶಕ್ತಿವಂತ ಅತಿ ಮಾನವರು ಈ ಕಪ್ಪು ಗುಳಿಯಲ್ಲೇ  ಇರುತ್ತಾರೆ. ಇದುವರೆಗೆ ಯಾರು ಸಹಾ ಈ ಕಪ್ಪು ಗುಳಿಯ ಅಸ್ತಿತ್ವವನ್ನು ಅಲ್ಲಗೆಳೆದಿಲ್ಲ . ಹಾಗು ಇದನ್ನು ಯಾರು ಸಹಾ ಹತ್ತಿರದಿಂದ ನೋಡಿಲ್ಲ . ಆದ್ರಿಂದ್ಲೇ ನನಗೆ ಅನ್ನಿಸ್ತಾ ಇರೋದು ಅಂದ್ರೆ, ನಮ್ಮ ಕಲ್ಪನೆಯಲ್ಲಿ ಇರುವ ಸ್ವರ್ಗ ಅಂದ್ರೆ ಇಲ್ಲೇ ಇದೆ. ಹಾಗಾಗೆ ನಮ್ಮ ಪುರಾಣದಲ್ಲಿ ಹೇಳ್ತಾರೆ, ಸ್ವರ್ಗಕ್ಕೆ ಜೀವಂತವಾಗಿ ಹೋಗಲಿಕ್ಕೆ ಸಾಧ್ಯವಿಲ್ಲ ಅಂತಾ . ಕಾರಣ ಅದೇ, ಇಲ್ಲಿ ಎಲ್ಲವೂ ಸ್ವಾಹಾ ಆಗಿ ಹೋಗಿ ಬಿಡುತ್ತದೆ . ಈ ಪ್ರದೇಶ ನಮ್ಮ ಸೌರ ವ್ಯುಹಗಳ ಜನ್ಮ ಸ್ಥಳ  ಕೂಡ ಹೌದು . ನಮ್ಮ ಸೃಷ್ಟಿ ಕರ್ತರೆಲ್ಲ ಇಲ್ಲೇ ಇರಬಹುದು .
ನಾನು ಒಂದು ಗಣೇಶನ ಶ್ಲೋಕದಲ್ಲಿ ಓದಿದ ನೆನಪು , ಸೂರ್ಯ ಕೋಟಿ ಸಮ ಪ್ರಭಾ ,ಎಂದು . ಇದರ ಅರ್ಥ ಕೋಟಿ ಸೂರ್ಯನ ಬೆಳಕಿಗೆ ಸಮನಾದದ್ದು ಎಂದು . ಅದರ ಅರ್ಥ , ನಮ್ಮ ಪುರ್ವಜರಿಗೆ ತಿಳಿದಿತ್ತು , ಸೂರ್ಯ ಕೇವಲ ಒಂದೇ ಒಂದು ಅಲ್ಲ, ಈ ಕ್ಷಿತಿಜದಲ್ಲಿ ಸಾವಿರಾರು ಸುರ್ಯರಿದ್ದಾರೆ ಎಂದು . ಈಗ ಇತ್ತಿಚಿನ ವಿಜ್ಞಾನಿಗಳೂ ಒಪ್ಪಿ ಕೊಳ್ಳುತ್ತಿದ್ದಾರೆ, ಇಲ್ಲಿ ನಮ್ಮ ಸೌರ್ಯ ಮಂಡಲದ ಹಾಗೆ ಸಾವಿರಾರು ಇದ್ದಾವೆ ಎಂದು . ಈ ರೀತಿಯ ಸಾವಿರಾರು ಸುರ್ಯಗಳು , ಒಂದೇ ಮಾರ್ಗದಲ್ಲಿ ಚಲಿಸುವಾಗ , ಆ ಮಾರ್ಗದಲ್ಲಿ ಉಂಟಾಗುವ ಬೆಳಕಿನ ಒಂದು ರೇಖೆಯ " ಮಿಲ್ಕಿ ವೆ " ಅಥವಾ " ಆಕಾಶ ಗಂಗೆ " . ಈ ರೀತಿಯ ಸಾವಿರಾರು ಸೌರ ಮಂಡಲ ಗಳು, ಎಲ್ಲಿಂದ ಬರುತ್ತವೆ , ಹೇಗೆ ಹುಟ್ಟಿ ಕೊಳ್ಳುತ್ತವೆ , ಎಂಬ ಪ್ರಶ್ನೆ ಸಹಜವಾಗಿ ಹುಟ್ಟಿ ಕೊಳ್ಳುತ್ತದೆ . ಇದಕ್ಕೆ ಉತ್ತರವೇ, ಬ್ಲಾಕ್ ಹೋಲ್  ಅಥವಾ ನಮ್ಮ ರೀತಿಯಲ್ಲಿ, ಸ್ವರ್ಗ. ನಾವು ಕರೆಯುವ ಬ್ರಹ್ಮ ಇಲ್ಲೇ ಇರುತ್ತಾನೆ . ಅವನಿಂದಲೇ ಸೃಷ್ಟಿಸಲ್ಪಟ್ಟ ಸಾವಿರಾರು ಸೌರ ಮಂಡಲಗಳು  ಒಂದರ ಹಿಂದೆ ಒಂದರಂತೆ ಸಾಲೋ ಸಾಲಾಗಿ , ಬ್ಲಾಕ್ ಹೋಲಿನ ಒಂದು ಕಡೆಯಿಂದ ಈ ಆಕಾಶ ಕಾಯದಲ್ಲಿ ಚಲಿಸುತ್ತ ಹೋಗುತ್ತವೆ . ಚಲಿಸುತ್ತ , ಚಲಿಸುತ್ತ , ಕೊನೆಯಲ್ಲಿ ಅವುಗಳೆಲ್ಲ ಪುನಃ ಹೋಗಿ ಬ್ಲಾಕ್ ಹೋಲ್ನಲ್ಲಿ ಒಂದಾಗಿ ಬಿದುತ್ತವೆ. ಇದನ್ನೇ ಶ್ರೀ ಕೃಷ್ಣ ಹೇಳಿದ್ದು, ಎಲ್ಲವೂ ನನ್ನಿಂದಲೇ ಹುಟ್ಟಿ, ನನ್ನೊಳಗೆ ಒಂದಾಗಿ ಹೋಗುತ್ತದೆ ಎಂದು . ಬ್ಲಾಕ್ ಹೋಲ್  ಅಥವಾ ಸ್ವರ್ಗದಿಂದ ಸುರು ಆದ, ಸೌರ ಮಂಡಲದ ಕಥೆ, ಸ್ವರ್ಗದೊಳಗೆ ಲೀನವಾಗುವುದರೊಂದಿಗೆ ಕೊನೆಗೊಳ್ಳುತ್ತದೆ . ಹೀಗೆ ಪ್ರತಿಯೊಂದು ಸೌರ ಮಂಡಲವು ಕೂಡ ತನ್ನೊಂದಿಗೆ ಇತರ ಗ್ರಹಗಳನ್ನು ಇಟ್ಟುಕೊಂಡು , ತನ್ನ ಪಥದಲ್ಲೇ ತಿರುಗುತ್ತ, ಅಕಾಶಕಯದಲ್ಲಿ ಚಲಿಸುತ್ತ ಹೋಗುತ್ತದೆ . ವೃತ್ತಾಕಾರದಲ್ಲಿ ಚಲಿಸುವ ಈ ಪಥವೇ ಆಕಾಶ ಕಾಯ. ಈ ರೀತಿ ಒಂದು ವೃತ್ತ ಪೂರ್ತಿಯಾಗಿ ಬರುವುದನ್ನೇ ನಾವು ನಮ್ಮ ಪುರಾಣದಲ್ಲಿ ಯುಗಗಳಾಗಿ ವಿಂಗಡಿಸಿ ಬೇರೆ ಬೇರೆ ಹೆಸರಿನಿಂದ ಕರೆದಿದ್ದೇವೆ .












ಮೇಲಿನ ಚಿತ್ರವನ್ನು ನೋಡಿದಾಗ ತಿಳಿಯುತ್ತದೆ , ಒಮ್ಮೆ ಸ್ವರ್ಗದಿಂದ ಹೊರ ಬಂದಂತಹ ಸೌರ್ಯ ಮಂಡಲವು, ನಾಲ್ಕು ಯುಗಗಳ ಪಥವನ್ನು ಪರಿಕ್ರಮಣ ಮಾಡುತ್ತಾ, ಒಟ್ಟಿಗೆ ೪೩,೨೦,೦೦೦ ವರ್ಷಗಳನ್ನು ಕ್ರಮಿಸಿ , ಮತ್ತೆ ಸ್ವರ್ಗವನ್ನು ಸೇರುತ್ತದೆ . ಈ ರೀತಿಯ ಯುಗಗಳ ಮಹತ್ವವೇನು ಎಂದು ನಾವೀಗ ತಿಳಿಯೋಣ . .

ಬ್ರಹ್ಮ ಪ್ರತಿಯೊಂದು ಸೌರ ಮಂಡಲವನ್ನು ತಯಾರು ಮಾಡಿ ಅದನ್ನು ಅದರ ಸಹಚರ ಗ್ರಹಗಳೊಂದಿಗೆ , ಆಕಾಶಕಯದಲ್ಲಿ ತನ್ನದೇ ಆದ ಕಕ್ಷೆಯಲ್ಲಿ ತೇಲಿಬಿಡುತ್ತಾನೆ . ಆ ರೀತಿ ಒಮ್ಮೆ ಅದರ ಕಕ್ಷೆಯಲ್ಲಿ ಬಿಟ್ಟ ಮೇಲೆ , ಆ ಸೌರ್ಯ ಮಂಡಲವು ತಾನಾಗಿಯೇ ತನ್ನ ಪಥದಲ್ಲಿ ತಿರುಗುತ್ತ, ಸಾಗುತ್ತದೆ. ಈ ರೀತಿ ಅದನ್ನು ತನ್ನ ಪಥದಲ್ಲಿ ಬಿಡುವ ಕೆಲಸವನ್ನು ಬ್ರಹ್ಮನ ಸಹಚರ ವಿಜ್ಞಾನಿಗಳ ಮಾಡುತ್ತಾರೆ . ಆ ವಿಜ್ಞಾನಿಗಳೇ , ಅಗ್ನಿ, ವಾಯು, ಜಲ .   ಅಗ್ನಿಯು ಸೂರ್ಯನನ್ನು ಅದರ ಪಥದಲ್ಲಿ ಇಟ್ಟು  ಅದರ ಚಲನೆಗೆ ಸಹಕಾರ ಮಾಡಿದರೆ, ಜಲವು, ಭೂಮಿಯನ್ನು ಅದರ ಪಥದಲ್ಲಿ ಇಡಲು ಸಹಾಯ ಮಾದುತ್ತದೆ. ವಾಯು ಭೂಮಿಯ ಸುತ್ತ ವಾಯು ಮಂಡಲವನ್ನು ತಯಾರಿಸಿ, ಅದನ್ನು ತನ್ನ ಪಥದಲ್ಲಿ ಚಲಿಸುವಂತೆ ಸಹಾಯ ಮಾಡುತ್ತದೆ . ಈ ಅಗ್ನಿ ದೇವ, ವಾಯು ದೇವ, ಜಲ ದೇವತೆ , ಬಹುಷಃ ಬಹಳ ದೊಡ್ಡ engineer  ಆಗಿರಬಹುದು. ಅವರು ಬಹಳ ದೊಡ್ಡ ದೊಡ್ಡ ಯಂತ್ರ ಅಥವಾ ಇನ್ಯಾವುದೋ ರೀತಿಯ ಉಪಕರಣಗಳನ್ನೂ ಅಥವಾ ಜೀವಿಗಳನ್ನೂ ಉಪಯೊಗಿಸಿರಬಹುದು. ನಾವು ಮೊದಲನೆಯ ದಶಾವತಾರದ ಪಾತ್ರವನ್ನು ಸೂಕ್ಷ್ಮವಾಗಿ ಗಮನಿಸಿದಲ್ಲಿ ತಿಳಿಯುತ್ತದೆ, ಅದು ಈ ಸೌರ ಮಂಡಲವನ್ನು ಅದರ ಪಥದಲ್ಲಿ ಇಟ್ಟು , ಅದರಲ್ಲಿ ಜೀವರಾಶಿಗಳನ್ನು ಇಡಲು ಬಳಸಿರುವ ಒಂದು ಯಂತ್ರ ಅಥವಾ ಜೀವಿ ಎಂದು ತಿಳಿಯುತ್ತದೆ .ಪುರಾಣವನ್ನು ಸರಿಯಾಗಿ ಓದಿದಲ್ಲಿ ತಿಳಿಯುವುದು ಏನು ಅಂದ್ರೆ, ಶ್ರೀ ವಿಷ್ಣುವು ಮತ್ಸ್ಯ ರೂಪವನ್ನು ತಾಳಿ , ಪ್ರಳಯದ ಸನ್ನಿಹದಲ್ಲಿರುವ ಈ ಭೂಮಂಡಲವನ್ನು ರಕ್ಷಿಸಲು ಶ್ರೀ ಸತ್ಯವ್ರತ ಎಂಬ ಮುನಿವರ್ಯರ ಸಹಾಯ ಪಡೆದು, ಎಲ್ಲ ರೀತಿಯ ಜೀವ ಸಂಕುಲಗಳ ಒಂದೊಂದು ಜೀವಗಳನ್ನು ತನ್ನೊಂದಿಗೆ ಒಂದು ಬೃಹತ್ ಹಡಗಿನೊಳಗೆ ಸೇರಿಸಿಕೊಂಡು ಪ್ರಳಯವನ್ನು ಪಾರು ಮಾಡಿ ಹೊಸ ಜೀವ ಸಂಕುಲವನ್ನು ಮತ್ತೆ ಪ್ರಾರಂಭ ಮಾಡುತ್ತಾನೆ ಎಂದಿದೆ . ಇದರ ಅರ್ಥ ಏನು ಅಂದರೆ,  ಕಲಿಯುಗದ ಕೊನೆಯ ಭಾಗದಲ್ಲಿ ಪ್ರತಿಯೊಂದು ಸೌರಮಂಡಲ ಈ ಮೇಲೆ ತಿಳಿಸಿದಂತೆ, ಬ್ಲಾಕ್ ಹೋಲ್ ನ್ನು ಪ್ರವೇಶಿಸುತ್ತದೆ . ಸೌರ ಮಂಡಲ ಬ್ಲಾಕ್ ಹೋಲ್ ಪ್ರವೇಶಿಸಿದ ನಂತರ ಯಾವುದೂ ಕೂಡ ಬದುಕಿ ಉಳಿಯುವುದು ಸಾಧ್ಯವಿಲ್ಲ . ಹಾಗಾಗಿ ಪ್ರತಿಯೊಂದು ಸೌರ ಮಂಡಲವು ಬ್ಲಾಕ್ ಹೋಲ್ ಪ್ರವೇಶಿಸುವ ಮುನ್ನ ಅದರಲ್ಲಿರುವ ಜೀವ ಸಂಕುಲವನ್ನು ಕಾಪಾಡಿ ಅದನ್ನು ಮತ್ತೊಂದು ಹೊಸ ಸೌರ ಮಂಡಲ ದಲ್ಲಿ, ಹೊಸ ಜೀವನವನ್ನು ಪ್ರಾರಂಭಿಸುವಂತೆ ಮಾಡುವುದೇ ಈ ಮತ್ಸ್ಯಾವತಾರದ ಕೆಲಸ.


ಈ ಮೇಲೆ ಕಾಣಿಸಿರುವ ಚಿತ್ರದಂತೆ ಸೌರ ಮಂಡಲವು ಬ್ಲಾಕ್ ಹೋಲ್ ಪ್ರವೇಶಿಸುವ ಮುನ್ನ , ಮತ್ಸಾವತಾರವೆಂಬ ಬೃಹತ್ ಶಕ್ತಿಯು ಈ ಜೀವ ಸಂಕುಲದ ಪ್ರತಿಯೊಂದು ಜೀವಿಗಳ ಒಂದೊಂದು ಪ್ರತಿಯೊಂದಿಂಗೆ , ಒಂದು ಬೃಹತ ಆಕಾರದ ಒಂದು ವಿಶಿಷ್ಟ ನವ್ಕೆಯೊಳಗೆ ಇಟ್ಟುಕೊಂಡು , ಬ್ಲಾಕ್ ಹೋಲನ್ನು  byepass  ಮಾಡಿ, ಬ್ರಹ್ಮನಿಂದ ಸೃಷ್ಟಿ ಗೊಂಡ ಹೊಸ ಸೌರ ಮಂಡಲ, ಈಗ ತಾನೇ ಬ್ಲಾಕ್ ಹೋಲಿನ ಇನ್ನೊಂದು ಬದಿಯಿಂದ ಹೊರಬಂದು, ತನ್ನ ಪಥದಲ್ಲಿ ತನ್ನ ಚಲನೆಯನ್ನು ಪ್ರಾರಂಭ  ಮಾಡಿರುವಂಥ ಭೂಮಿಯಲ್ಲಿ  ತಂದು ಬಿಡುತ್ತಾನೆ . . ಈ ರೀತಿ ಜೀವ ಸಂಕುಲ ಮತ್ತೆ ಪ್ರಾರಂಭ ಗೊಳ್ಳುತ್ತದೆ , ಆದರೆ, ಇನ್ನೊಂದು ಹೊಸ ಸೌರ ಮಂಡಲದಲ್ಲಿ . ಈ ರೀತಿ , ಪ್ರತಿಬಾರಿಯೂ , ಪ್ರತಿಯೊಂದು ಸೌರ ಮಂಡಲವು ತನ್ನ ಪ್ರಯಾಣದ ಕೊನೆಯ ಭಾಗದಲ್ಲಿ, ಬ್ಲಾಕ್ ಹೋಲನ್ನು  ಪ್ರವೇಶಿಸುವ ಸಮಯದಲ್ಲಿ , ಅದರಲ್ಲಿರುವ ಜೀವ ಸಂಕುಲವನ್ನು ಕಾಪಾಡಿ, ಮತ್ತೊಂದು ಹೊಸ ಸೌರ ಮಂಡಲದಲ್ಲಿ ಸೇರಿಸಿ ಸಂರಕ್ಷಿಸುವುದೇ ಮತ್ಸ್ಯ ಅವತಾರದ ಕೆಲಸ. ಇದನ್ನೇ ನಮ್ಮ ಪುರಾಣದಲ್ಲಿ ಹೇಳಿರುವುದು . ನಮ್ಮ ಪುರಾಣ ಪೂರ್ಣ ರೀತಿಯಲ್ಲಿ ಒಂದು ವೈಜ್ಞಾನಿಕ ಕಥಾನಕ .
ಪುರಾಣದಲ್ಲಿ ಹೇಳಿರುವಂತೆ ಈ ಭೂಮಿಯನ್ನುಕಾಪಾಡಲು ವಿಷ್ಣುವು ಮತ್ಸ್ಯ ರೂಪ  ತಾಳಿ ಸತ್ಯವ್ರತ ಎಂಬ ತಪಸ್ವಿಯ ಕಯ್ಯಲ್ಲಿ ಸಿಗುತ್ತದೆ . ಸತ್ಯವ್ರತನು ಈ ಮತ್ಸ್ಯವನ್ನು ಹಿಡಿದು ಒಂದು ಸಣ್ಣ ಪಾತ್ರೆಯಲ್ಲಿ ಹಾಕುತ್ತಾನೆ . ಬೆಳಗಾಗುವಷ್ಟರಲ್ಲಿ ಈ ಮತ್ಸ್ಯಆ ಪಾತ್ರೆಗಿಂತ ದೊಡ್ಡದಾಗಿರುತ್ತದೆ . ಅದನ್ನು ಸತ್ಯವ್ರತನು ಹಿಡಿದು ಇನ್ನೂ ದೊಡ್ಡ ಪಾತ್ರೆಯಲ್ಲಿ ಹಾಕಿ ಇಡುತ್ತಾನೆ . ಮರುದಿನ ಬೆಳಿಗ್ಗೆ ಆ ಮತ್ಸ್ಯವು ಆ ಪಾತ್ರೆಗಿಂತ ದೊಡ್ಡದಾಗಿ ಬೆಳೆದಿರುತ್ತದೆ . ಈ ರೀತಿ ದೊಡ್ಡ ಪಾತ್ರೆಯಲ್ಲಿ ಹಾಕಿದಂತೆ ಅದಕ್ಕಿಂತ ದೊಡ್ಡದಾಗಿ ಬೆಳೆಯುತ್ತ ಹೊಗುತ್ತದೆ. ಕೊನೆಗೆ ಅದನ್ನು ಸಮುದ್ರದಲ್ಲಿ ಹಾಕಿದಾಗ ಅಲ್ಲಿ ಕೂಡ ಅದು ಬ್ರಹದಾಕಾರವಾಗಿ ಬೆಳೆದು ನಿಲ್ಲುತ್ತದೆ. ಆಗ ಸತ್ಯವ್ರತನಿಗೆ ತಿಳಿಯುತ್ತದೆ, ಇದು ಸಾಮಾನ್ಯ ಮತ್ಸ್ಯವಲ್ಲ ಎಂದು . ಆಗ ಆ ಮತ್ಸ್ಯವು ಹೇಳುತ್ತದೆ ಈಗ ಪ್ರಳಯವಾಗಲಿದೆ ಮತ್ತು ಈ ಭೂಮಿಯ ನಶವಾಗಲಿದೆ . ಅದ್ದರಿಂದ ನೀನು ಈ ಭೂಮಿಯ ಮೇಲಿರುವ ಎಲಾ ರೀತಿಯ ಜೀವ ಸಂಕುಲಗಳ ಒಂದೊಂದು ತಳಿಗಳೊಂದಿಗೆ ಒಂದು ದೊಡ್ಡ ನಾವೆಯಲ್ಲಿ ಕುಳಿತುಕೋ , ನಾನು ನಿಮ್ಮೆಲ್ಲರನ್ನು ಸುರಕ್ಷಿತ ಜಾಗಕ್ಕೆ ಕೊಂಡೊಯ್ದು ಏರಿಸುತ್ತೇನೆ . ಆಗ ಸತ್ಯವ್ರತನು ಅದೇ ರೀತಿ ಎಲ್ಲ ರೀತಿಯ ಜೀವ ಸಂಕುಲಗಳ ತಳಿಗಳೊಂದಿಗೆ ಒಂದು ನಾವೆಯೊಳಗೆ ಕುಳಿತಾಗ , ಆ ಬ್ರಹದಾಕಾರದ ಮತ್ಸ್ಯವು ಆ ನಾವೆಯನ್ನು ಕೊಂಡೊಯ್ದು ಸುರಕ್ಷಿತ ಜಾಗಕ್ಕೆ ಸೇರಿಸುತ್ತಾನೆ ಮತ್ತು ಅಲ್ಲಿ ಪುನಃ ಜೀವ ಸಂಕುಲಗಳು ಪ್ರಾರಂಭವಾಗುತ್ತದೆ ಎಂದು ಹೇಳಲಾಗುತ್ತದೆ . 



ಈ ಕಥೆಯಿಂದ ನಮಗೆ ತಿಳಿಯುವುದೇನೆಂದರೆ, ಆ ಸರ್ವಶಕ್ತಿವಂತನಾದ , ವಿಷ್ಣುವು , ಈ ಜೀವ ಸಂಕುಲವನ್ನು ರಕ್ಷಣೆ ಮಾಡುವುದಕ್ಕಾಗಿ ಮತ್ತು, ಇದರ ನಿರಂತರತೆಗಾಗಿ , ಮತ್ಸ್ಯ ರೂಪದಲ್ಲಿ ಬಂದು ಎಲ್ಲವನ್ನು ಒಂದು ಬ್ರಹದ್ ರೂಪದ ನೌಕೆಯಲ್ಲಿ ಕೂರಿಸಿಕೊಂಡು ಮತ್ತೊಂದು ಹೊಸತಾಗಿ ಜೀವಿತ ಗೊಂಡ , ತನ್ನ ಪಥದಲ್ಲಿ ಚಲಿಸಲು ಪ್ರಾರಂಭಿಸಿರುವ ಹೊಸ ಭೂಮಿಯಲ್ಲಿ ತಂದು ಬಿಡುತ್ತಾನೆ, . ಇಲ್ಲಿ ಪುನಹ ಜೀವನ ಪ್ರಾರಂಭವಾಗುತ್ತದೆ . ಇಲ್ಲಿ ಒಂದು ತಿಳಿದು ಕೊಳ್ಳಬೇಕಾದುದು ಎಂದರೆ , ಪುರಾಣವನ್ನು ಸಾಮಾನ್ಯ ಜನರಿಗೆ ಅರ್ಥವಾಗುವಂತೆ ಕಥೆಯ ರೂಪದಲ್ಲಿ ಬರೆಯಲಾಗಿದೆ. ಆದರೆ, ಇದು ನಿಜಕ್ಕೂ ಒಂದು ಬ್ರಹತ್ ವಿಜ್ಞಾನ ಮತ್ತು ಇದರಲ್ಲಿ ಒಳಗೊಂಡಿರುವುದೇ ಬ್ರಹತ್ ತಂತ್ರಜ್ಞಾನ . ಬ್ಲಾಕ್ ಹೋಲಿನ ಕಡೆ ಸೆಳೆಯಲ್ಪಡುತ್ತಿರುವ ಈ ಭೂಮಿಯ ಮೇಲಿರುವ ಸಂಪೂರ್ಣ ಜೀವ ಸಂಕುಲವನ್ನು, ಆ ಸೆಳೆತದಿಂದ ತಪ್ಪಿಸಿ, ಆ ಬ್ಲಾಕ್ ಹೋಲನ್ನು , ತಪ್ಪಿಸಿ, ಬ್ಲಾಕ್  ಹೋಲಿನ ಮತ್ತೊಂದು ಭಾಗದಿಂದ ಹೊರಬಂದಿರುವ ಭೂಮಿಯತ್ತ ಕೊಂಡೊಯ್ಯುವುದು ಸಾಮಾನ್ಯವಾದ ತಂತ್ರಜ್ಞಾನವಲ್ಲ . ನಮ್ಮಂತಹ ಹುಲು ಮಾನವರಿಗೆ ಇದು ಬಹುಷಃ ಇದು ಅರ್ಥವಾಗುವುದಿಲ್ಲ ಕೂಡ . ಇದನ್ನು ತಿಳಿದುಕೊಳ್ಳಬೇಕಾದರೆ ನಮ್ಮ ಜ್ಞಾನ ಶಕ್ತಿಯನ್ನು ಬ್ರಹದಾಕಾರದಲ್ಲಿ ಬೆಳೆಸಿಕೊಳ್ಳಬೇಕಾಗುತ್ತದೆ . ಇದನ್ನೇ ಹಿಂದಿನ ಕಾಲದಲ್ಲಿ ತಪಸ್ಸಿನ ಮೂಲಕ ಸಾಧಿಸುತ್ತಿದ್ದರು. ತಪಸ್ಸು ಮತ್ತು ಧ್ಯಾನದಿಂದ , ಮತ್ತು ಸತತ ಸಾಧನೆಯಿಂದ ಖಂಡಿತವಾಗಿಯೂ ಬ್ರಹತ್ ಜ್ಞಾನ ಶಕ್ತಿಯನ್ನು ಬೆಳೆಸಿಕೊಳ್ಳ ಬಹುದು . ನಾವೆಲ್ಲಾ ಈಗ ಪ್ರತಿಬಿಂಬಿಸುವಂತೆ , ನಮ್ಮ ಪುರಾತನ ಕಾಲದ ಋಷಿ ಮುನಿಗಳು ಕೇವಲ ಸನ್ಯಾಸಿಗಳಲ್ಲ , ಅವರೆಲ್ಲ ಅತಿ ಮೇಧಾವಿ ವಿಜ್ಞಾನಿಗಳು . ಅವರು ಇಂದಿನ ವಿಜ್ನಾನಿಗಳಂತೆ ಕೇವಲ ಕಣ್ಣಿಗೆ ಕಾಣುವುದನ್ನು ನಂಬುವ ಮೌಡ್ಯರಾಗಿರಲಿಲ್ಲ , ಬದಲಿಗೆ ಕಣ್ಣಿಗೆ ಕಾಣದಿರುವಂತಹ ಅನೇಕ ವಿಷಯಗಳನ್ನು , ತಮ್ಮ ಜಾಗ್ರತ ಗೊಳಿಸಿದ ಮೆದುಳಿನ ಶಕ್ತಿಯಿಂದ ನೋಡುವಂತಹವರಾಗಿದ್ದರು . ಇಂತಹ ಬ್ರಹತ್ ಶಕ್ತಿಗಳನ್ನು ಹೊಂದಿರುವಂತಹವರೆ ನಮ್ಮ ಪೂರ್ವಜರು . ಇಲ್ಲವಾದಲ್ಲಿ, ಪಂಚಾಂಗದಲ್ಲಿ ಇವತ್ತಿಗೂ ಕೂಡ, ಖಗೋಳ ಶಾಸ್ತ್ರದ ಬಗ್ಗೆ ಏನು ತಿಳಿಯದ ಜನರು ಕೂಡ , ಕರಾರುವಕ್ಕಾಗಿ ಸೌರ್ಯ ಮಂಡಲದ ಚಲನ ವಲನಗಳ  ಬಗ್ಗೆ ಹೆಲಬಲ್ಲರು. ಈ ಪಂಚಾಂಗವನ್ನು ಶೃಷ್ಟಿ ಮಾಡಿದವರು  ಯಾವುದೇ ರೀತಿಯ setalite  ಆಗಲಿ . ಅಥವಾ telescope ಆಗಲಿ ಬಳಸಲಿಲ್ಲ . ಬದಲಾಗಿ ತಮ್ಮ ಜ್ಞಾನ ಶಕ್ತಿಯನ್ನು ಬಳಸಿಕೊಂಡಿದ್ದಾರೆ .


ನೋಡಲು ಕೌಪೀನ ಉಟ್ಟುಕೊಂಡು ಸಾಧಾರನವಾಗಿ ಕಾಣಿಸುವಂತಹ ಈ ಋಷಿ ಮುನಿಗಳು ನಿಜವಾಗಿಯೂ ಅತೀ ಮೇಧಾವಿ ವಿಜ್ಞಾನಿ ಗಳಾಗಿದ್ದರು . ಈಗಿನ ವಿಜ್ಞಾನವು computor ,laptopಗಳನ್ನು ತನ್ನ ಜ್ಞಾನ ಭಂಡಾರವನ್ನು ಕಾಪಾಡಿ ಸಂರಕ್ಷಿಸಲು ಬಳಸುತ್ತದೆ ಮತ್ತು ನಂಬುತ್ತದೆ . ಆದರೆ ವಾಸ್ತವಿಕತೆ ಎಂದರೆ ಅವೆಲ್ಲವುಗಳು ಕೂಡ ಅವಲಂಬಿತಗಳು . ವಿದ್ಯುತ್, ಬ್ಯಾಟರಿ ಶಕ್ತಿಯಿಲ್ಲದೆ , ಮತ್ತು ಆಜ್ಞೆ ಇಲ್ಲದೆ, ತನ್ನ ಸ್ವಂತ ಶಕ್ತಿಯ ಮೇಲೆ ಇವುಗಳು ಎನನ್ನು ಮಾಡಲಾರವು . ಇದನ್ನು ನಮ್ಮ ಪೂರ್ವಜರು ಅರಿತಿದ್ದರು, ಆದ್ದರಿಂದಲೇ ನಮ್ಮ ಮೆದುಳಿಗೆ ಪ್ರಾಮುಖ್ಯತೆ ಕೊಟ್ಟಿದ್ದರು , ಮತ್ತು ಎಲ್ಲ ಜ್ಞಾನವನ್ನು ಅಲ್ಲಿ ತುಂಬಿ ಇಡುತ್ತಿದ್ದರು ಮತ್ತು ಅದನ್ನು ಜನಾಂಗದಿಂದ ಜನಾಂಗಕ್ಕೆ , ಕಾಲದಿಂದ ಕಾಲಕ್ಕೆ, ಮೌಕಿಕವಾಗಿ ತೆಗೆದುಕೊಂಡು ಹೊಗುತ್ತಿದ್ದರು.

ಈ ರೀತಿ ನಮ್ಮ ಈಗಿನ ನಾವಿರುವ ಸೌರಮಂದಲವು, ಬ್ಲಾಕ್ ಹೋಲಿನ ಸಮೀಪಕ್ಕೆ ಹೋಗುತ್ತಾ ಇದೆ. ಹಾಗಾಗಿಯೇ, ಇತ್ತೀಚಿನ ದಿನಗಳಲ್ಲಿ ಈಗಿನ ವಿಜ್ಞಾನಿಗಳಿಗೆ ಹೊಸದೊಂದು ಬ್ಲಾಕ್  ಹೋಲ್ ಶೃಷ್ಟಿ ಆಗುತ್ತಿರುವುದು ಗೋಚರಿಸುತ್ತಿದೆ . ಆದರೆ ಅದು ಹೊಸದಾಗಿ ಸೃಷ್ಟಿ ಆಗುತ್ತಾ ಇಲ್ಲ . ಅದು ಅನಂತಕಾಲದಿಂದ ಅಲ್ಲೇ ಇದೆ. ನಮ್ಮ ಪೂರ್ವಜರಾದ ಋಷಿ ಮುನಿಗಳು ಯಾವಾಗಿನಿಂದಲೋ ಈ ಸತ್ಯವನ್ನುತಿಳಿದಿದ್ದರು . ಅದರ ಒಂದು ಪ್ರತೀಕವೆ  ಮತ್ಸ್ಯಾವತಾರ . ಕಲಿಯುಗದ ಪ್ರಾರಂಭ ಆಗಿಬಿಟ್ಟಿದೆ . ಇನ್ನು ಈಗ ಈ ನಮ್ಮ ಸೌರ ಮಂಡಲದ ಪ್ರಯಾಣವು ಬ್ಲಾಕ್ ಹೋಲಿನ ಕಡೆಗೆಯೇ ಎಂಬುದು ನಿಶ್ಚಿತ. ಇದಕ್ಕಾಗಿಯೇ ನಮ್ಮ ಪೂರ್ವಜರು ಒಳ್ಳೆಯ ಕೆಲಸಗಳನ್ನು ಮಾಡು , ಮತ್ತು ಮೋಕ್ಷವನ್ನು ಪಡೆ ಎಂದು ಹೇಳಿರುವುದು . ಜನಸಂಖ್ಯೆಯ ಭಾರದಿಂದಾಗಿ . ಸೌಲಭ್ಯಗಳ ಕೊರತೆಯಿಂದಾಗಿ , ಈ ಸೌರ ಮಂಡಲವು ನಿರಂತರವಾಗಿ ಚಲಿಸಲು ಬೇಕಾಗಿರುವ ಇಂಧನಗಳ ಕೊರತೆಯಿಂದಾಗಿ, ಈ ಭೂಮಿಯ ಮೇಲೆ ಅನೇಕ ರೀತಿಯ ಊಹಿಸಲು ಅಸಾಧ್ಯವಾದ  ತೊಂದರೆಗಳು,ಕಷ್ಟಗಳು ಪ್ರಾರಂಭವಾಗಲಿವೆ . ಮಳೆ, ಗಾಳಿ ಬೆಳಕು, ಇವುಗಳ ಕೊರತೆ  ಉಂಟಾಗಲಿದೆ . ಸೂರ್ಯನ ಬೆಳಕಿನಲ್ಲಿ ಏರು ಪೇರು ಗಳಾಗಲಿವೆ. ಸಮುದ್ರಗಳು ಉಕ್ಕಿ ಪ್ರವಾಹಗಳು ಬರಲಿವೆ. ನೀರು ಬತ್ತಿ ಹೊಗಲಿವೆ. ಕೊನೆಯಲ್ಲಿ ಎಲ್ಲವೂ  ನಾಶವಾಗಿ,ಈ ಸೌರ ಮಂಡಲವು ಅತಿ ವೇಗವಾಗಿ ಬ್ಲಾಕ್  ಹೋಲನ್ನು  ಪ್ರವೆಶಿಸಲಿದೆ. ಆದರೆ ಅದಕ್ಕೆ ಮೊದಲು, ಅಂದರೆ ಲಕ್ಷಾಂತರ ವರ್ಷಗಳ ಮೊದಲೇ, ಈ ಭೂಮಿಯ ಮೇಲಿನ ಎಲ್ಲ ಜೀವ ಸಂಕುಲಗಳು ನಾಶವಾಗಲಿವೆ . ಈ ಸ್ಥಿತಿಪ್ರಾರಂಭವಾಗುವಾಗ ಲೇ , ಶ್ರೀ ವಿಷ್ಣುವು ಪುನಃ ತನ್ನ ಅತ್ಯಂತ ಉನ್ನತವಾದ ತಂತ್ರಜ್ಞಾನದಿಂದಈ ಭೂಮಿಯ ಮೇಲಿರುವ ಜೀವ ಸಂಕುಲದ ಎಲ್ಲ ರೀತಿಯ ತಳಿಗಳ ಕೆಲವು ಪ್ರತಿಗಳೊಂದಿಗೆ ಮತ್ತೊಂದು ಹೊಸದಾಗಿ ತನ್ನ ಪ್ರಯಾಣವನ್ನು ಪ್ರಾರಂಭ ಮಾಡಿರುವಂತಹ  ಹೊಸ ಸೌರ ಮಂಡಲದ , ಹೊಸ ಭೂಮಿಯಲ್ಲಿ , ತಂದು ಸೇರಿಸಿ , ಈ ಜೀವಿಗಳ , ಮತ್ತೊಂದು ಹೊಸ ಪ್ರಯಾಣವನ್ನು ಪ್ರಾರಂಭ ಮಾಡಿಸುತ್ತಾನೆ . ಇದುವೇ ಜೀವನ ಚಕ್ರ .

ತಮ್ಮ ಅನಿಸಿಕೆಗಳನ್ನು ಖಂಡಿತವಾಗಿ ತಿಳಿಸಿ .